ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಗಳಿಕೆ‌‌‌ ರಜೆ ಮಂಜೂರು ಮಾಡಲು ಡಿಸಿಗೆ ಮನವಿ

Last Updated 7 ಜನವರಿ 2022, 16:34 IST
ಅಕ್ಷರ ಗಾತ್ರ

ವಿಜಯಪುರ: ಬಿಎಲ್ಓ ಹಾಗೂ ಚೆಕ್ ಪೋಸ್ಟ್ ಗಡಿಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಲು ಶಿಕ್ಷಣ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಿಕೋಟಾ, ಬಬಲೇಶ್ವರ ಹಾಗೂ ವಿಜಯಪುರ ಗ್ರಾಮೀಣ ವಲಯದ ಶಿಕ್ಷಕ ಸಂಘ ಹಾಗೂ ನೌಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಬಲೇಶ್ವರ, ವಿಜಯಪುರ ನಗರ, ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯ ವ್ಯಾಪ್ತಿಯಲ್ಲಿ ಶಿಕ್ಷಕರು ಬೂತ್‌ ಮಟ್ಟದ (ಬಿ.ಎಲ್.ಓ ) ಅಧಿಕಾರಿಗಳಾಗಿ ವರ್ಷದ 365 ದಿನಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕಾಗಿ ರಜಾ ರಹಿತ ನೌಕರರೆಂದು ಪರಿಗಣಿಸಿ ಅವರಿಗೆ ವಾರ್ಷಿಕ 30 ಗಳಿಕೆ ರಜೆಯನ್ನು ಮಂಜೂರು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಗಳಿಕೆ ರಜೆ ಮಂಜೂರಾತಿಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಸಂಘಟನೆಯ ಪದಾಧಿಕಾರಿಗಳಾದ ಉಜ್ವಲ ಬನಸೋಡೆ, ವಿ.ಬಿ. ದಿವಾನಜಿ, ಎಂ.ಎ.ಬಿಸನಾಳ, ಪಿ.ಕೆ.ಪ್ರಭಾಕರ, ಅಲ್ಲಾಭಕ್ಷ ವಾಲಿಕಾರ, ಅರ್ಜುನ ಲಮಾಣಿ, ಹಣಮಂತ ಕೊಣದಿ, ಸಿ.ಟಿ.ಜತ್ತಿ, ಅಶೋಕ ಚನಬಸಗೋಳ, ಎ.ಬಿ.ಧಡಕೆ, ಅಶೋಕ ಬೂದಿಹಾಳ, ಆರ್.ಎಂ.ಮೇತ್ರಿ, ಝಡ್.ಐ.ಇಂಡಿಕಾರ, ಬಿ.ಎಸ್.ಮಠ, ಅಶೋಕ ಭಜಂತ್ರಿ, ಆರ್.ಎಸ್.ದಿಕ್ಷಿತ್‌, ಎಸ್.ಬಿ.ಮಡಸನಾಳ, ಎಲ್.ಎಂ.ಬಡಿಗೇರ, ಸಿದರಾಯ ಅಥಣಿ, ವಿ.ಎಸ್.ಕಳಸಗೊಂಡ, ವೆಂಕಟೇಶ ಕಪಟಕರ, ಆರ್.ಎಸ್.ಮಸಳಿ, ಆರ್‌.ಎಸ್.ಜಾಧವ, ಎಸ್.ಕೆ.ದೇಶಪಾಂಡೆ, ಎಂ.ಐ.ಕುಡಚಿ, ಐ.ಬಿ.ಅಡಳ್ಳಿ, ಎಸ್.ಬಿ.ಕೊಪ್ಪದ, ಎಂ.ಎಸ್.ಟಕ್ಕಳಕಿ, ಎನ್.ಜಿ.ತೆಗ್ಗಿನಮನಿ, ಪಿ.ಜೆ.ಇನಾಂದಾರ, ಎನ್.ಎಚ್.ಮುಜಾವರ, ಎಸ್.ಎನ್.ಬಾಗಲಕೋಟ, ಪರಸಪ್ಪಾ ಮಾದರ, ಎಚ್.ಎಂ.ಮುಲ್ಲಾ, ಬಿ.ವೈ.ಮೇಡೆಗಾರ, ಎಸ್.ಎಸ್.ಬಬಲೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT