<p><strong>ತಾಂಬಾ: </strong>ಗ್ರಾಮದಿಂದ 8 ಕಿ.ಮೀ. ಅಂತರದಲ್ಲಿರುವ ಹಿರೇಮಸಳಿ ಗ್ರಾಮದವರಿಗಿನ ರಸ್ತೆ ತೀರಾ ಹದಗೆಟ್ಟಿದ್ದು, ಆಯ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬಂತಹ ಪರಿಸ್ಥಿತಿ<br>ಇದೆ. </p><p>ರಸ್ತೆಯ ತುಂಬಾ ಗುಂಡಿಗಳಿದ್ದು, ಇಕ್ಕೆಲಗಳಲ್ಲಿ ಜಾಲಿ ಗಿಡಗಳು ಆಳೆತ್ತರ ಬೆಳೆದಿವೆ. ಎರಡೂ ಗ್ರಾಮಗಳ ಜನರು ಎಚ್ಚರಿಕೆಯಿಂದ ವಾಹನ ಚಲಾಯಿಸಿ ಊರು ತಲುಪಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಇದರಿಂದ ಗ್ರಾಮಗಳ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.</p><p>ವಿಜಯಪುರದಿಂದ ಮಿರಗಿಗೆ ಹೋಗುವ ವಾಹನಗಳು ಹಿರೇಮಸಳಿ, ತಾಂಬಾ, ಕೆಂಗನಾಳ, ಶಿರಕನಳ್ಳಿ, ಮುತ್ತಿತರ ಗ್ರಾಮಗಳ ಮೂಲಕ ಸಂಚರಿಸಬೇಕು. ಮುಖ್ಯ ರಸ್ತೆ ಆಗಿರುವುದರಿಂದ ದಿನವಿಡೀ ವಾಹನಗಳ ದಟ್ಟಣೆ ಇರುತ್ತದೆ. </p><p>ವಾಹನಗಳ ಎಷ್ಟೇ ಹುಷಾರಾಗಿ ಸಾಗಿದರೂ ಟೈರ್ಗೆ ಕಲ್ಲು ಸಿಲುಕಿ ಸಿಡಿದರೆ ರಸ್ತೆ ಪಕ್ಕದಲ್ಲಿ ಓಡಾಡುವ ಜನರು ಗಾಯಗೊಂಡ ಹಲವು ನಿದರ್ಶನಗಳಿವೆ. ವಾಹನಗಳ ಚಕ್ರದ ಜೊತೆಗೆ ಮೇಲೇಳುವ ದೂಳು, ಜನರನ್ನು ಆರೋಗ್ಯ ಸಮಸ್ಯೆಗೂ<br>ಸಿಲುಕಿಸುತ್ತಿದೆ.</p><p><strong>ರೋಗಿಗಳ ಪರದಾಟ:</strong> ತಾಂಬಾ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇರುವುದರಿಂದ ಸುತ್ತಲಿನ ಗ್ರಾಮಗಳ ಜನರು ಆರೋಗ್ಯ ಸೇವೆಗೆ ಇಲ್ಲಿಗೆ ಬರಬೇಕಿದೆ. ಹದಗೆಟ್ಟ ರಸ್ತೆಯಲ್ಲೇ ಪಯಣಿಸಬೇಕಿರುವುದರಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎನ್ನುತ್ತಾರೆ ಗ್ರಾಮಸ್ಥರು.</p><p>‘ರಸ್ತೆ ದುರಸ್ತಿಗಾಗಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥ ಪುಂಡಲಿಕ ಕಪಾಲಿ ತಿಳಿಸಿದರು.</p><p>‘ರಸ್ತೆ ದುರಸ್ತಿಗಾಗಿ ಸಾಕಷ್ಟಯ ಅನುದಾನ ಬರುತ್ತದೆ. ಆದರೆ, ಉತ್ತಮ ರಸ್ತೆಗಳ ನಿರ್ಮಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ತಾತ್ಕಾಲಿಕವಾಗಿ ತಗ್ಗು–ಗುಂಡಿಗಳನ್ನು ಮುಚ್ಚಲೂ ಮುಂದಾಗುತ್ತಿಲ್ಲ. ಇದರಿಂದಾಗಿ ಜನರಿಗೆ ತೊಂದರೆ ಹೆಚ್ಚುತ್ತಿದೆ’ ಎಂದು ಅಲವತ್ತುಕೊಂಡರು.</p>.<div><blockquote>ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಬಹುತೇಕ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಶಾಸಕ ಯಶವಂತರಾಯನಗೌಡ ಪಾಟೀಲರ ಗಮನಕ್ಕೆ ತರಲಾಗಿದೆ. ಆದ್ಯತೆ ಮೇರೆಗೆ ರಸ್ತೆ ಸುಧಾರಣೆ ಮಾಡಲಾಗುತ್ತದೆ.</blockquote><span class="attribution">ದಯಾನಂದ ಮಠ, ಎಇಇ, ಲೋಕೋಪಯೋಗಿ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಂಬಾ: </strong>ಗ್ರಾಮದಿಂದ 8 ಕಿ.ಮೀ. ಅಂತರದಲ್ಲಿರುವ ಹಿರೇಮಸಳಿ ಗ್ರಾಮದವರಿಗಿನ ರಸ್ತೆ ತೀರಾ ಹದಗೆಟ್ಟಿದ್ದು, ಆಯ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬಂತಹ ಪರಿಸ್ಥಿತಿ<br>ಇದೆ. </p><p>ರಸ್ತೆಯ ತುಂಬಾ ಗುಂಡಿಗಳಿದ್ದು, ಇಕ್ಕೆಲಗಳಲ್ಲಿ ಜಾಲಿ ಗಿಡಗಳು ಆಳೆತ್ತರ ಬೆಳೆದಿವೆ. ಎರಡೂ ಗ್ರಾಮಗಳ ಜನರು ಎಚ್ಚರಿಕೆಯಿಂದ ವಾಹನ ಚಲಾಯಿಸಿ ಊರು ತಲುಪಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಇದರಿಂದ ಗ್ರಾಮಗಳ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.</p><p>ವಿಜಯಪುರದಿಂದ ಮಿರಗಿಗೆ ಹೋಗುವ ವಾಹನಗಳು ಹಿರೇಮಸಳಿ, ತಾಂಬಾ, ಕೆಂಗನಾಳ, ಶಿರಕನಳ್ಳಿ, ಮುತ್ತಿತರ ಗ್ರಾಮಗಳ ಮೂಲಕ ಸಂಚರಿಸಬೇಕು. ಮುಖ್ಯ ರಸ್ತೆ ಆಗಿರುವುದರಿಂದ ದಿನವಿಡೀ ವಾಹನಗಳ ದಟ್ಟಣೆ ಇರುತ್ತದೆ. </p><p>ವಾಹನಗಳ ಎಷ್ಟೇ ಹುಷಾರಾಗಿ ಸಾಗಿದರೂ ಟೈರ್ಗೆ ಕಲ್ಲು ಸಿಲುಕಿ ಸಿಡಿದರೆ ರಸ್ತೆ ಪಕ್ಕದಲ್ಲಿ ಓಡಾಡುವ ಜನರು ಗಾಯಗೊಂಡ ಹಲವು ನಿದರ್ಶನಗಳಿವೆ. ವಾಹನಗಳ ಚಕ್ರದ ಜೊತೆಗೆ ಮೇಲೇಳುವ ದೂಳು, ಜನರನ್ನು ಆರೋಗ್ಯ ಸಮಸ್ಯೆಗೂ<br>ಸಿಲುಕಿಸುತ್ತಿದೆ.</p><p><strong>ರೋಗಿಗಳ ಪರದಾಟ:</strong> ತಾಂಬಾ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇರುವುದರಿಂದ ಸುತ್ತಲಿನ ಗ್ರಾಮಗಳ ಜನರು ಆರೋಗ್ಯ ಸೇವೆಗೆ ಇಲ್ಲಿಗೆ ಬರಬೇಕಿದೆ. ಹದಗೆಟ್ಟ ರಸ್ತೆಯಲ್ಲೇ ಪಯಣಿಸಬೇಕಿರುವುದರಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎನ್ನುತ್ತಾರೆ ಗ್ರಾಮಸ್ಥರು.</p><p>‘ರಸ್ತೆ ದುರಸ್ತಿಗಾಗಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥ ಪುಂಡಲಿಕ ಕಪಾಲಿ ತಿಳಿಸಿದರು.</p><p>‘ರಸ್ತೆ ದುರಸ್ತಿಗಾಗಿ ಸಾಕಷ್ಟಯ ಅನುದಾನ ಬರುತ್ತದೆ. ಆದರೆ, ಉತ್ತಮ ರಸ್ತೆಗಳ ನಿರ್ಮಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ತಾತ್ಕಾಲಿಕವಾಗಿ ತಗ್ಗು–ಗುಂಡಿಗಳನ್ನು ಮುಚ್ಚಲೂ ಮುಂದಾಗುತ್ತಿಲ್ಲ. ಇದರಿಂದಾಗಿ ಜನರಿಗೆ ತೊಂದರೆ ಹೆಚ್ಚುತ್ತಿದೆ’ ಎಂದು ಅಲವತ್ತುಕೊಂಡರು.</p>.<div><blockquote>ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಬಹುತೇಕ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಶಾಸಕ ಯಶವಂತರಾಯನಗೌಡ ಪಾಟೀಲರ ಗಮನಕ್ಕೆ ತರಲಾಗಿದೆ. ಆದ್ಯತೆ ಮೇರೆಗೆ ರಸ್ತೆ ಸುಧಾರಣೆ ಮಾಡಲಾಗುತ್ತದೆ.</blockquote><span class="attribution">ದಯಾನಂದ ಮಠ, ಎಇಇ, ಲೋಕೋಪಯೋಗಿ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>