ಘಟನೆ ಕುರಿತಂತೆ ವೈದ್ಯರನ್ನು ಪ್ರಶ್ನಿಸಿದರೆ, ‘ಒಂದು ಸಾವಿರಕ್ಕೆ ಎರಡು ಪ್ರಕರಣಗಳು ಈ ರೀತಿಯಾಗುವ ಸಾಧ್ಯತೆಯಿರುತ್ತದೆ. ಉದ್ದೇಶ ಪೂರ್ವಕವಾದ ತಪ್ಪು ನಡೆದಿಲ್ಲ. ಕೆಲ ಸಂದರ್ಭಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ಚುಚ್ಚುಮದ್ದನ್ನು ನೀಡಿದ್ದರಿಂದಲೇ ಮಗುವಿಗೆ ಹೀಗಾಗಿದೆ ಎಂಬುದನ್ನು ಕೆಲ ವರದಿಗಳು ದೃಢಪಡಿಸಿವೆ. ಈ ಬೆಳವಣಿಗೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ’ ಎಂದು ಲಕ್ಷ್ಮೀಕಾಂತ ಕತ್ತಿ ಹೇಳಿದರು.