<p><strong>ತಿಕೋಟಾ</strong>: ದ್ರಾಕ್ಷಿ, ದಾಳಿಂಬೆ ಬೆಳೆಯುವ ಗರಸು ನೆಲ ಹಾಗೂ ಮಡ್ಡಿ ಜಮೀನಿನಲ್ಲಿ ‘ಜಪಾನಿಸ್ ರೆಡ್ ಡೈಮಂಡ್’ ಎಂಬ ವಿಶೇಷ ತಳಿಯ ಪೇರು ಬೆಳೆಯುವಲ್ಲಿ ತಾಲ್ಲೂಕಿನ ಬಾಬಾನಗರ ಗ್ರಾಮದ ಬಾಹುಬಲಿ ಭೀಮನಗೌಡ ಆಯತವಾಡ ರೈತನ ಯಶಸ್ವಿಯಾಗಿದ್ದಾರೆ.</p>.<p>ಆಯತವಾಡ ತಮ್ಮ 14 ಎಕರೆ ಜಮೀನಿನಲ್ಲಿ ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ಬೆಳೆಗಳ ಜೊತೆ ಒಂದೂವರೆ ಎಕರೆ ಜಮೀನಿನಲ್ಲಿ ಗುಜರಾತ್ನಿಂದ ವಿಶೇಷ ತಳಿಯ ಪೇರು ಸಸಿಗಳನ್ನು ತಂದಿದ್ದಾರೆ. ಒಂದು ಸಸಿಗೆ ₹130 ರಂತೆ ಖರೀದಿಸಿ ಸಾಗಾಣಿಕೆ ವೆಚ್ಚ ಸೇರಿ ₹150 ಖರ್ಚು ಮಾಡಿ, ಒಟ್ಟು ಒಂದು ಸಾವಿರ ಸಸಿಯನ್ನು ಖರೀದಿಸಿದ್ದಾರೆ.</p>.<p>₹1.5 ಲಕ್ಷ ಸಸಿಗಳಿಗೆ ಹಾಗೂ ₹50 ಸಾವಿರ ಹನಿ ನೀರಾವರಿ ಹಾಗೂ ಕೂಲಿಕಾರರ ವೆಚ್ಚ ಸೇರಿ ಒಟ್ಟು ₹2 ಲಕ್ಷ ಖರ್ಚು ಮಾಡಿ, ಸಸಿ ನಾಟಿ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ 6 ಅಡಿ, ಸಾಲಿನಿಂದ ಸಾಲಿಗೆ 10 ಅಡಿ ನಾಟಿ ಮಾಡಿ ಹನಿ ನೀರಾವರಿ ಅಳವಡಿಸಿ, 6 ಅಡಿಯ ದ್ರಾಕ್ಷಿಯ ಕಲ್ಲು ಹಾಗೂ ತಂತಿ ಕಟ್ಟಿದ್ದಾರೆ.</p>.<p>ಸಸಿ ನೆಟ್ಟು 8 ತಿಂಗಳಿಗೆ ಹೂವು, ಮಿಡಿ ಬರಪೂರ ಬಂದಿದೆ. ಸದ್ಯ 14 ತಿಂಗಳಿಗೆ ಅಂದರೆ ಹೂವು ಹಿಡಿದು 6 ತಿಂಗಳಿಗೆ 12 ಟನ್ ಪೇರು ಬೆಳೆದಿದೆ. ಪ್ರತಿ ಕಾಯಿಗೂ ಸುರಕ್ಷಾ ಕವರ್ ಅಳವಡಿಸಿದ್ದಾರೆ. ಇದರಿಂದ ಕಾಯಿಗೆ ಯಾವುದೇ ಹುಳುವಿನ ಹಾನಿಯಾಗದೇ ರುಚಿಕರವಾದ, ಮೃದುವಾದ ಫಲ ಬಂದಿದೆ. ದೇಶದ ರಾಜಧಾನಿ ದೆಹಲಿ ಮಾರುಕಟ್ಟೆಗೆ ಪೇರು ರವಾನೆ ಮಾಡಿದ್ದಾರೆ.</p>.<p>‘ಕೆ.ಜಿಗೆ ₹95 ರಿಂದ ₹150ರ ವರೆಗೆ ದರ ದೊರೆತು ಖರ್ಚು ವೆಚ್ಚ ತೆಗೆದು ₹10 ಲಕ್ಷ ಆದಾಯ ಮೊದಲ ವರ್ಷದ ಮೊದಲ ಬೆಳೆಯಿಂದಲೇ ಕೈ ಸೇರಿದೆ. ಆರು ತಿಂಗಳ ನಂತರ ಎರಡನೇ ಕೊಯ್ಲು ಬರಲಿದ್ದು, ₹20 ಲಕ್ಷಕ್ಕೂ ಅಧಿಕ ಆದಾಯ ಬರುವ ನೀರಿಕ್ಷೆ ಇದೆ’ ಎಂದು ರೈತ ಬಾಹುಬಲಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ನೀರಾವರಿ ಸಮೃದ್ಧಿ: ಎರಡು ಕೊಳವೆಬಾವಿ, ಒಂದು ಕೃಷಿ ಹೊಂಡ ಇದ್ದು, ಸಚಿವ ಎಂ.ಬಿ.ಪಾಟೀಲರು ಮಾಡಿದ ನೀರಾವರಿ ಯೋಜನೆಯಿಂದ ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದ್ದರಿಂದ ಕೊಳವೆಬಾವಿಗಳಿಂದ ಬರಪೂರ ನೀರು ಬರುತ್ತಿವೆ ಎನ್ನುತ್ತಾರೆ ರೈತ ಬಾಹುಬಲಿ.</p>.<p>ಆರೋಗ್ಯಕ್ಕೆ ಹಿತ: ಈ ಜಪಾನಿಸ್ ರೆಡ್ ಡೈಮಂಡ್ ಪೇರು ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು, ಮಧುಮೇಹ ಇರುವವರಿಗೆ ಹಾಗೂ ಜೀರ್ಣಕ್ರಿಯೆಗೆ ಈ ಹಣ್ಣು ಸಹಕಾರಿಯಾಗಲಿದೆ. ವಿಟಿಮಿನ್ ‘ಸಿ’ ಪೋಷಕಾಂಶ ದೊರೆತು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಎನ್ನಲಾಗುತ್ತಿದೆ.</p><p>–––</p><p><strong>ದ್ರಾಕ್ಷಿ ಬೆಳೆಗೆ ಖರ್ಚು ವೆಚ್ಚ ಜಾಸ್ತಿ ಆದಾಯ ಕಡಿಮೆ. ಈ ಪೇರು ಬೆಳೆಗೆ ಖರ್ಚು ಕಡಿಮೆ ಆದಾಯ ಜಾಸ್ತಿ. ವರ್ಷದಲ್ಲಿ ಎರಡು ಬೆಳೆ ಬೆಳೆದು ಕಡಿಮೆ ಅವಧಿಯಲ್ಲಿ ಲಕ್ಷಾಂತರ ಆದಾಯ ಪಡೆಯಬಹುದು</strong></p><p><strong>–ಬಾಹುಬಲಿ ಭೀಮನಗೌಡ ಆಯತವಾಡ ಪೇರು ಬೆಳೆ ರೈತ ಬಾಬಾನಗರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಕೋಟಾ</strong>: ದ್ರಾಕ್ಷಿ, ದಾಳಿಂಬೆ ಬೆಳೆಯುವ ಗರಸು ನೆಲ ಹಾಗೂ ಮಡ್ಡಿ ಜಮೀನಿನಲ್ಲಿ ‘ಜಪಾನಿಸ್ ರೆಡ್ ಡೈಮಂಡ್’ ಎಂಬ ವಿಶೇಷ ತಳಿಯ ಪೇರು ಬೆಳೆಯುವಲ್ಲಿ ತಾಲ್ಲೂಕಿನ ಬಾಬಾನಗರ ಗ್ರಾಮದ ಬಾಹುಬಲಿ ಭೀಮನಗೌಡ ಆಯತವಾಡ ರೈತನ ಯಶಸ್ವಿಯಾಗಿದ್ದಾರೆ.</p>.<p>ಆಯತವಾಡ ತಮ್ಮ 14 ಎಕರೆ ಜಮೀನಿನಲ್ಲಿ ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ಬೆಳೆಗಳ ಜೊತೆ ಒಂದೂವರೆ ಎಕರೆ ಜಮೀನಿನಲ್ಲಿ ಗುಜರಾತ್ನಿಂದ ವಿಶೇಷ ತಳಿಯ ಪೇರು ಸಸಿಗಳನ್ನು ತಂದಿದ್ದಾರೆ. ಒಂದು ಸಸಿಗೆ ₹130 ರಂತೆ ಖರೀದಿಸಿ ಸಾಗಾಣಿಕೆ ವೆಚ್ಚ ಸೇರಿ ₹150 ಖರ್ಚು ಮಾಡಿ, ಒಟ್ಟು ಒಂದು ಸಾವಿರ ಸಸಿಯನ್ನು ಖರೀದಿಸಿದ್ದಾರೆ.</p>.<p>₹1.5 ಲಕ್ಷ ಸಸಿಗಳಿಗೆ ಹಾಗೂ ₹50 ಸಾವಿರ ಹನಿ ನೀರಾವರಿ ಹಾಗೂ ಕೂಲಿಕಾರರ ವೆಚ್ಚ ಸೇರಿ ಒಟ್ಟು ₹2 ಲಕ್ಷ ಖರ್ಚು ಮಾಡಿ, ಸಸಿ ನಾಟಿ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ 6 ಅಡಿ, ಸಾಲಿನಿಂದ ಸಾಲಿಗೆ 10 ಅಡಿ ನಾಟಿ ಮಾಡಿ ಹನಿ ನೀರಾವರಿ ಅಳವಡಿಸಿ, 6 ಅಡಿಯ ದ್ರಾಕ್ಷಿಯ ಕಲ್ಲು ಹಾಗೂ ತಂತಿ ಕಟ್ಟಿದ್ದಾರೆ.</p>.<p>ಸಸಿ ನೆಟ್ಟು 8 ತಿಂಗಳಿಗೆ ಹೂವು, ಮಿಡಿ ಬರಪೂರ ಬಂದಿದೆ. ಸದ್ಯ 14 ತಿಂಗಳಿಗೆ ಅಂದರೆ ಹೂವು ಹಿಡಿದು 6 ತಿಂಗಳಿಗೆ 12 ಟನ್ ಪೇರು ಬೆಳೆದಿದೆ. ಪ್ರತಿ ಕಾಯಿಗೂ ಸುರಕ್ಷಾ ಕವರ್ ಅಳವಡಿಸಿದ್ದಾರೆ. ಇದರಿಂದ ಕಾಯಿಗೆ ಯಾವುದೇ ಹುಳುವಿನ ಹಾನಿಯಾಗದೇ ರುಚಿಕರವಾದ, ಮೃದುವಾದ ಫಲ ಬಂದಿದೆ. ದೇಶದ ರಾಜಧಾನಿ ದೆಹಲಿ ಮಾರುಕಟ್ಟೆಗೆ ಪೇರು ರವಾನೆ ಮಾಡಿದ್ದಾರೆ.</p>.<p>‘ಕೆ.ಜಿಗೆ ₹95 ರಿಂದ ₹150ರ ವರೆಗೆ ದರ ದೊರೆತು ಖರ್ಚು ವೆಚ್ಚ ತೆಗೆದು ₹10 ಲಕ್ಷ ಆದಾಯ ಮೊದಲ ವರ್ಷದ ಮೊದಲ ಬೆಳೆಯಿಂದಲೇ ಕೈ ಸೇರಿದೆ. ಆರು ತಿಂಗಳ ನಂತರ ಎರಡನೇ ಕೊಯ್ಲು ಬರಲಿದ್ದು, ₹20 ಲಕ್ಷಕ್ಕೂ ಅಧಿಕ ಆದಾಯ ಬರುವ ನೀರಿಕ್ಷೆ ಇದೆ’ ಎಂದು ರೈತ ಬಾಹುಬಲಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ನೀರಾವರಿ ಸಮೃದ್ಧಿ: ಎರಡು ಕೊಳವೆಬಾವಿ, ಒಂದು ಕೃಷಿ ಹೊಂಡ ಇದ್ದು, ಸಚಿವ ಎಂ.ಬಿ.ಪಾಟೀಲರು ಮಾಡಿದ ನೀರಾವರಿ ಯೋಜನೆಯಿಂದ ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದ್ದರಿಂದ ಕೊಳವೆಬಾವಿಗಳಿಂದ ಬರಪೂರ ನೀರು ಬರುತ್ತಿವೆ ಎನ್ನುತ್ತಾರೆ ರೈತ ಬಾಹುಬಲಿ.</p>.<p>ಆರೋಗ್ಯಕ್ಕೆ ಹಿತ: ಈ ಜಪಾನಿಸ್ ರೆಡ್ ಡೈಮಂಡ್ ಪೇರು ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು, ಮಧುಮೇಹ ಇರುವವರಿಗೆ ಹಾಗೂ ಜೀರ್ಣಕ್ರಿಯೆಗೆ ಈ ಹಣ್ಣು ಸಹಕಾರಿಯಾಗಲಿದೆ. ವಿಟಿಮಿನ್ ‘ಸಿ’ ಪೋಷಕಾಂಶ ದೊರೆತು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಎನ್ನಲಾಗುತ್ತಿದೆ.</p><p>–––</p><p><strong>ದ್ರಾಕ್ಷಿ ಬೆಳೆಗೆ ಖರ್ಚು ವೆಚ್ಚ ಜಾಸ್ತಿ ಆದಾಯ ಕಡಿಮೆ. ಈ ಪೇರು ಬೆಳೆಗೆ ಖರ್ಚು ಕಡಿಮೆ ಆದಾಯ ಜಾಸ್ತಿ. ವರ್ಷದಲ್ಲಿ ಎರಡು ಬೆಳೆ ಬೆಳೆದು ಕಡಿಮೆ ಅವಧಿಯಲ್ಲಿ ಲಕ್ಷಾಂತರ ಆದಾಯ ಪಡೆಯಬಹುದು</strong></p><p><strong>–ಬಾಹುಬಲಿ ಭೀಮನಗೌಡ ಆಯತವಾಡ ಪೇರು ಬೆಳೆ ರೈತ ಬಾಬಾನಗರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>