ವಿಜಯಪುರ: ಕೃಷ್ಣಾ ಭಾಗ್ಯ ಜಲ ನಿಗಮದಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ತಾಲ್ಲೂಕಿನ ತಿಡಗುಂದಿ ಬಳಿ ಕೈಗೆತ್ತಿಕೊಂಡಿರುವ ಕಾಲುವೆ ಹಾಗೂ ಮೇಲ್ಸೇತುವೆ ಕಾಮಗಾರಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ ಭಾನುವಾರ ಪರಿಶೀಲಿಸಿದರು.
ತುಡಗುಂದಿ ಶಾಖಾ ಕಾಲುವೆ ಕಿ.ಮೀ 2.70 ರಿಂದ 17.43 ವರೆಗೆ ಕಾಲುವೆ ನಿರ್ಮಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಚಿಮ್ಮಲಗಿ ಏತನೀರಾವರಿ ಯೋಜನೆ, ಮುಳವಾಡ ಹಂತ-3, ಹೆರಕಲ್ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಯೋಜನೆಯಿಂದ ವಿಜಯಪುರ ಹಾಗೂ ಇಂಡಿ ತಾಲ್ಲೂಕಿನ ಸುಮಾರು 25,572 ಹೆಕ್ಟೇರ್ ಕ್ಷೇತ್ರವು ನೀರಾವರಿಗೆ ಒಳಪಡಲಿದೆ. ಈ ಕಾಲುವೆಯು 14.205 ಕ್ಯೂಸೆಕ್ ನೀರಿನ ಸಾಮರ್ಥ್ಯ ಹೊಂದಿದ್ದು, 36 ವಿತರಣಾ ಕಾಲುವೆಗಳನ್ನು ಒಳಗೊಂಡಿದೆ. ಈ ಕಾಲುವೆಯಿಂದ 38 ಗ್ರಾಮಗಳು ನೀರಾವರಿಗೆ ಒಳಪಡಲಿವೆ.