ಅದರಂತೆ ಶತಮಾನೋತ್ಸವ ದೇಣಿಗೆ ಸಂಗ್ರಹದ ಜತೆಗೆ ಇನ್ನೊಂದಷ್ಟುಹಣವನ್ನು ಸಂಗ್ರಹಿಸಿ 2017ರಲ್ಲಿ ಸುಮಾರು ₹12 ಲಕ್ಷ ಖರ್ಚು ಮಾಡಿ, ಬಾವಿಗೆ ದಕ್ಕೆ ಆಗದಂತೆ ಸುತ್ತಲು ಕಾಲಂಗಳನ್ನು ಹಾಕಿ, ಸುಂದರವಾದ ದೇವಸ್ಥಾನ ನಿರ್ಮಿಸಿ ಅದರೊಳಗೆ ಭವ್ಯವಾದ ಚತುರ್ಮುಖ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದನ್ನು ನಡೆದಾಡುದ ದೇವರು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದ್ದು ವಿಶೇಷ. ಸದ್ಯ ಪ್ರತಿ ನಿತ್ಯ ಪೂಜೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ವೃತ್ತ ನಿರ್ಮಾಣದ ಕುರಿತು ಮಾಹಿತಿ ನೀಡಿದರು.