<p><strong>ವಿಜಯಪುರ</strong>: ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿಗಳವರ 431 ನೇ ವರ್ಧಂತಿ ಉತ್ಸವವನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.</p>.<p>ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಇದೇ ಸಂದರ್ಭದಲ್ಲಿ ವೃಂದಾವನಕ್ಕೆ ನೂತನ ವಸ್ತ್ರ ಸಮರ್ಪಿಸಲಾಯಿತು.</p>.<p>ನಂತರ ಕನಕಸೇವೆ ನಡೆಯಿತು. ವೇದ ಮಂತ್ರ ವಾದ್ಯಗಳೊಂದಿಗೆ ರಥೋತ್ಸವ ವೈಭವದಿಂದ ಜರುಗಿತು. ಅಲಂಕೃತ ರಥದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಪ್ರತಿಮೆ ಕಂಗೊಳಿಸುತ್ತಿತ್ತು. ಭಕ್ತ ಸಂಗೀತ ಮಠದೆಲ್ಲೆಡೆ ಮಾರ್ದನಿಸಿತು. ಮಠವನ್ನು ತಳಿರು ತೋರಣ ಬಾಳೆ ದಿಂಡುಗಳಿಂದ ಅಲಂಕರಿಸಲಾಗಿತ್ತು.</p>.<p>ಮಠದಲ್ಲಿ ಏಳು ದಿನಗಳ ಕಾಲ ಹುಬ್ಬಳ್ಳಿಯ ಪ್ರವಚನ ಪಂಡಿತ ಗೋಪಿನಾಥಾಚಾರ್ಯ ಗಲಗಲಿ ಅವರಿಂದ ಪ್ರವಚನ ಸಪ್ತಾಹದ ಮಂಗಳ ಜರುಗಿತು.</p>.<p>ಗೋಪಿನಾಥಾಚಾರ್ಯ ಗಲಗಲಿ ಮಾತನಾಡಿ, ಗುರುಸಾರ್ವಭೌಮರನ್ನು ಜ್ಞಾನ ದೀಪ ಪ್ರಕಾಶಿಸಿದವರು, ಭಕ್ತರು ಭಕ್ತಿಯಿಂದ ಕರೆದಲ್ಲಿ ರಾಯರು ಖಂಡಿತವಾಗಿ ಬರುವರು. ಗುರುರಾಯರು ಅನೇಕರ ಮೇಲೆ ದಯೆ ತೋರಿಸಿರುವರು’ ಎಂದರು.</p>.<p>ಗೋರಖಪುರ ಸಂಪ್ರದಾಯದ ಭಿಕ್ಷುಕನ ಕಥೆಯನ್ನು ಮೂಲವಾಗಿಟ್ಟುಕೊಂಡ ರಚಿಸಿದ ಅಲಖ್ ನಿರಂಜನ ಕಾವ್ಯವನ್ನು ರಸವತ್ತಾಗಿ ವಿವರಿಸಿದ ಪಂಡಿತರು, ಅಧ್ಯಾತ್ಮ ಪರಂಪರೆಯನ್ನು ಜೀವಂತವಾಗಿರಿಸಿಕೊಂಡುದರಲ್ಲಿ ಸಾಧು ಸಂತರ ಪ್ರಯತ್ನ ಶ್ಲಾಘನೀಯ ಎಂದರು.</p>.<p>ಹುಬ್ಬಳ್ಳಿಯ ಆನಂದರಾವ್ ನಾಯಕ, ಮಠದ ವಿಚಾರಣಾಕರ್ತಾ ಗೋಪಾಲ ನಾಯಕ ದಂಪತಿ ಅವರು ಪಂಡಿತ್ ಗೋಪಿನಾಥಾಚಾರ್ಯ ಗಲಗಲಿ ಅವರಿಗೆ ಗುರುಕಾಣಿಕೆ ನೀಡಿ ಗೌರವಿಸಿದರು.</p>.<p>ಗೋಪಾಲ ನಾಯಕ ಮಾತನಾಡಿ, ನಂಜನಗೂಡು ಮಠ ಸ್ಥಾಪನೆಯಾಗಿ 20 ವರ್ಷಗಳಾಗಿದ್ದು, ಅದರ ಇತಿಹಾಸ ವಿವರಿಸಿದರು. </p>.<p>ಗುರುರಾಯರು ತಮ್ಮ ಜೀವಿತದ ಅವಧಿಯಲ್ಲಿ ವಿಜಯಪುರಕ್ಕೆ ಕೃಷ್ಣೆಯ ತಟದಲ್ಲಿ ಬಂದು ಹೋಗಿದ್ದರ ಕುರಿತು ಪ್ರಸ್ತಾಪಿಸಿದರು.</p>.<p>ಪಂಡಿತ್ ಮಧ್ವೇಶಾಚಾರ್ಯ ಜೋಶಿ (ಮುತ್ತಗಿ) ಪ್ರಶ್ನೋತ್ತರ ನಡೆಸಿಕೊಟ್ಟು, ಪ್ರವಚನಕಾರರನ್ನು ಪರಿಚಯಿಸಿದರು. ಪಂಡಿತ್ ಪ್ರಣವಾಚಾರ್ಯ ಕಟ್ಟಿ ಮಾತನಾಡಿದರು. ಪ್ರವಚನಕಾರರನ್ನು ನಗರದ ಗಾಯತ್ರಿ ಸಮೂಹದ ಪರವಾಗಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿಗಳವರ 431 ನೇ ವರ್ಧಂತಿ ಉತ್ಸವವನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.</p>.<p>ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಇದೇ ಸಂದರ್ಭದಲ್ಲಿ ವೃಂದಾವನಕ್ಕೆ ನೂತನ ವಸ್ತ್ರ ಸಮರ್ಪಿಸಲಾಯಿತು.</p>.<p>ನಂತರ ಕನಕಸೇವೆ ನಡೆಯಿತು. ವೇದ ಮಂತ್ರ ವಾದ್ಯಗಳೊಂದಿಗೆ ರಥೋತ್ಸವ ವೈಭವದಿಂದ ಜರುಗಿತು. ಅಲಂಕೃತ ರಥದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಪ್ರತಿಮೆ ಕಂಗೊಳಿಸುತ್ತಿತ್ತು. ಭಕ್ತ ಸಂಗೀತ ಮಠದೆಲ್ಲೆಡೆ ಮಾರ್ದನಿಸಿತು. ಮಠವನ್ನು ತಳಿರು ತೋರಣ ಬಾಳೆ ದಿಂಡುಗಳಿಂದ ಅಲಂಕರಿಸಲಾಗಿತ್ತು.</p>.<p>ಮಠದಲ್ಲಿ ಏಳು ದಿನಗಳ ಕಾಲ ಹುಬ್ಬಳ್ಳಿಯ ಪ್ರವಚನ ಪಂಡಿತ ಗೋಪಿನಾಥಾಚಾರ್ಯ ಗಲಗಲಿ ಅವರಿಂದ ಪ್ರವಚನ ಸಪ್ತಾಹದ ಮಂಗಳ ಜರುಗಿತು.</p>.<p>ಗೋಪಿನಾಥಾಚಾರ್ಯ ಗಲಗಲಿ ಮಾತನಾಡಿ, ಗುರುಸಾರ್ವಭೌಮರನ್ನು ಜ್ಞಾನ ದೀಪ ಪ್ರಕಾಶಿಸಿದವರು, ಭಕ್ತರು ಭಕ್ತಿಯಿಂದ ಕರೆದಲ್ಲಿ ರಾಯರು ಖಂಡಿತವಾಗಿ ಬರುವರು. ಗುರುರಾಯರು ಅನೇಕರ ಮೇಲೆ ದಯೆ ತೋರಿಸಿರುವರು’ ಎಂದರು.</p>.<p>ಗೋರಖಪುರ ಸಂಪ್ರದಾಯದ ಭಿಕ್ಷುಕನ ಕಥೆಯನ್ನು ಮೂಲವಾಗಿಟ್ಟುಕೊಂಡ ರಚಿಸಿದ ಅಲಖ್ ನಿರಂಜನ ಕಾವ್ಯವನ್ನು ರಸವತ್ತಾಗಿ ವಿವರಿಸಿದ ಪಂಡಿತರು, ಅಧ್ಯಾತ್ಮ ಪರಂಪರೆಯನ್ನು ಜೀವಂತವಾಗಿರಿಸಿಕೊಂಡುದರಲ್ಲಿ ಸಾಧು ಸಂತರ ಪ್ರಯತ್ನ ಶ್ಲಾಘನೀಯ ಎಂದರು.</p>.<p>ಹುಬ್ಬಳ್ಳಿಯ ಆನಂದರಾವ್ ನಾಯಕ, ಮಠದ ವಿಚಾರಣಾಕರ್ತಾ ಗೋಪಾಲ ನಾಯಕ ದಂಪತಿ ಅವರು ಪಂಡಿತ್ ಗೋಪಿನಾಥಾಚಾರ್ಯ ಗಲಗಲಿ ಅವರಿಗೆ ಗುರುಕಾಣಿಕೆ ನೀಡಿ ಗೌರವಿಸಿದರು.</p>.<p>ಗೋಪಾಲ ನಾಯಕ ಮಾತನಾಡಿ, ನಂಜನಗೂಡು ಮಠ ಸ್ಥಾಪನೆಯಾಗಿ 20 ವರ್ಷಗಳಾಗಿದ್ದು, ಅದರ ಇತಿಹಾಸ ವಿವರಿಸಿದರು. </p>.<p>ಗುರುರಾಯರು ತಮ್ಮ ಜೀವಿತದ ಅವಧಿಯಲ್ಲಿ ವಿಜಯಪುರಕ್ಕೆ ಕೃಷ್ಣೆಯ ತಟದಲ್ಲಿ ಬಂದು ಹೋಗಿದ್ದರ ಕುರಿತು ಪ್ರಸ್ತಾಪಿಸಿದರು.</p>.<p>ಪಂಡಿತ್ ಮಧ್ವೇಶಾಚಾರ್ಯ ಜೋಶಿ (ಮುತ್ತಗಿ) ಪ್ರಶ್ನೋತ್ತರ ನಡೆಸಿಕೊಟ್ಟು, ಪ್ರವಚನಕಾರರನ್ನು ಪರಿಚಯಿಸಿದರು. ಪಂಡಿತ್ ಪ್ರಣವಾಚಾರ್ಯ ಕಟ್ಟಿ ಮಾತನಾಡಿದರು. ಪ್ರವಚನಕಾರರನ್ನು ನಗರದ ಗಾಯತ್ರಿ ಸಮೂಹದ ಪರವಾಗಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>