ತಾವರಖೇಡಕ್ಕೆ ಕಡಣಿ ಹತ್ತಿರ ಜಾಗ ಖರೀದಿಸಿ ಅಲ್ಲಿ ಮನೆಗಳ ನಿರ್ಮಾಣದ ಎಲ್ಲ ಕಾಮಗಾರಿಗಳನ್ನು ಮಾಡಲಾಗಿದೆ. ಇಲ್ಲಿಗೆ ಜನರು ಸ್ಥಳಾಂತರವಾಗಬೇಕಿದೆ. ಈ ಬಡಾವಣೆಗೆ ಮೂಲಸೌಲಭ್ಯಗಳು ನೀಡಲಾಗಿದೆ. ಉತ್ತಮ ಗುಣಮಟ್ಟದ ರಸ್ತೆಯೂ ನಿರ್ಮಾಣವಾಗಿದೆ. ಅದು ಬಳಕೆಯಿಲ್ಲದೆ ಉಪಯೋಗಕ್ಕೆ ಬಾರದ್ದಾಗಿದೆ. ಮುಖ್ಯವಾಗಿ ಇಲ್ಲಿ ಮತ್ತೇ ರಸ್ತೆ, ಚರಂಡಿ ಹೊಸದಾಗಿ ನಿರ್ಮಿಸಬೇಕಿದೆ, ಇದೇ ಪರಿಸ್ಥಿತಿಯು ತಾರಾಪುರ ಪುನರ್ವಸತಿ ಕೇಂದ್ರದ್ದಾಗಿದೆ ಎಂದು ಕಡಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾವಿತ್ರಿ ನಾಟೀಕಾರ ತಿಳಿಸುತ್ತಾರೆ.