240 ವಿದ್ಯಾರ್ಥಿನಿಯರನ್ನೊಳಗೊಂಡ ಹಾಸ್ಟೆಲ್ನಿಂದ ಸ್ನಾನದ ನೀರು, ಶೌಚಾಲಯದ ನೀರು ಅಪಾರ ಪ್ರಮಾಣದಲ್ಲಿ ಶೇಖರಣೆಗೊಂಡು ಸುತ್ತಲೂ ಮಲೀನಗೊಂಡಿತ್ತು. ಅಷ್ಟೇ ಗಬ್ಬು ವಾಸನೆಯೂ ಇತ್ತು. ಇದನ್ನು ಗಮನಿಸಿದ ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಜಲಶುದ್ದೀಕರಣ ಘಟಕ ಸ್ಥಾಪನೆಗೆ ಮುಂದಾಗಿ ಮಹದುಪಕಾರ ಮಾಡಿದ್ದಾರೆ. ಇಂಥ ಯುನಿಟ್ಗಳ ಬಳಕೆ ಹೆಚ್ಚಿದರೆ ಹನಿ, ಹನಿ ನೀರಿನ ಸದ್ಬಳಕೆಯಾಗುವ ಮೂಲಕ ನೀರಿನ ಕೊರತೆ ನಿವಾರಣೆಯಾಗಬಹುದಾಗಿದೆ. ಇಂಥ ಯುನಿಟ್ಗನ್ನು ಪಟ್ಟಣಗಳ ಪುರಸಭೆಗಳು ಅಳವಡಿಸಿಕೊಂಡರೆ ತುಂಬಾ ಉಪಯೋಗಕಾರಿಯಾಗುತ್ತದೆ ಎನ್ನುತ್ತಾರೆ ಕಾಲೇಜು ಪ್ರಾಚಾರ್ಯ ಡಿ.ಎಂ.ಪಾಟೀಲ.