ಕೊಣ್ಣೂರ ಮಡಿಕೇಶ್ವರ, ಢವಳಗಿ ಗ್ರಾಮಗಳಲ್ಲಿ ಜರುಗಿದ ಉತ್ತರ ಕರ್ನಾಟಕ ಕನ್ನಡಿಗರ ಸ್ವಾಭಿಮಾನಿ ಯಾತ್ರೆ ಕಾರ್ಯಕ್ರಮ ನಂತರ ಅವರು ಮಾತನಾಡಿದರು.
‘ಒಂದು ಲಕ್ಷ ಜನ ಪಾಲ್ಗೊಳ್ಳುವ ಐತಿಹಾಸಿಕ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿ.ಎಂ ಕುಮಾರಸ್ವಾಮಿ ಸಮ್ಮುಖದಲ್ಲಿ 50 ಸಾವಿರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಜೆಡಿಎಸ್ ಸೇರುವೆ. ಪಕ್ಷದ ಎಲ್ಲ 33 ಶಾಸಕರ ಜೊತೆ ಬೆಳಗಾವಿ ಸುವರ್ಣಸೌಧ ಪ್ರವೇಶಿಸಿ ನಂತರ ಅಧಿವೇಶನದಲ್ಲಿ ಪಾಲ್ಗೊಳ್ಳುವೆ’ ಎಂದು ಹೇಳಿದರು.