ವಿಜಯಪುರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕು ಮಾಚನೂರ ಗ್ರಾಮದ ಬಸಲಿಂಗಪ್ಪ ಮರೇಪ್ಪಾ ಮಾಚನೂರ ಎಂಬಾತ ಮೃಪಟ್ಟವರು.
ಝಳಕಿ ಹೋರ್ತಿ ಎನ್.ಎಚ್. 13 ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಗಂಭೀರ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಝಳಕಿ ಪೊಲೀಸರು ತಿಳಿಸಿದ್ದಾರೆ.
ಬೈಕ್ ಪಲ್ಟಿ ಸವಾರ ಸಾವು
ವಿಜಯಪುರ: ಬೈಕ್ ಸ್ಕಿಡ್ ಆಗಿ ಸವಾರ ಮೃತಪಟ್ಟ ಘಟನೆ ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂಡಿ ತಾಲ್ಲೂಕು ತಾಂಬಾ ಗ್ರಾಮದ ಅಬ್ದುಲ್ಹಮೀದ ದಸ್ತಗೀರಸಾಬ ವಾಲೀಕಾರ ಎಂಬಾತ ಮೃತಪಟ್ಟವ.
ವೇಗವಾಗಿ ನಿರ್ಲಕ್ಷ್ಯತನದಿಂದ ಬೈಕ್ ಓಡಿಸಿದ್ದರಿಂದ ಸಿಂದಗಿ ತಾಲ್ಲೂಕು ಹರನಾಳ ಕ್ರಾಸ್ ಬಳಿ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ದೇವರ ಹಿಪ್ಪರಗಿ ಪೊಲೀಸರು ತಿಳಿಸಿದ್ದಾರೆ.