ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛತೆಯೇ ಸೇವೆ’ ಅಭಿಯಾನ

ಯಶಸ್ವಿಗೊಳಿಸಿದ್ದಕ್ಕೆ ಎಲ್ಲರಿಗೂ ಅಭಿನಂದನೆಗಳು - ಆರ್.ಮಂಜುನಾಥ.
Published 1 ಅಕ್ಟೋಬರ್ 2023, 16:42 IST
Last Updated 1 ಅಕ್ಟೋಬರ್ 2023, 16:42 IST
ಅಕ್ಷರ ಗಾತ್ರ

ನಾರಾಯಣಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಸ್ವಚ್ಛ ಭಾರತ ಅಭಿಯಾನದಲ್ಲಿ ಬಸವಸಾಗರ ಜಲಾಶಯ ಅಡಿಯಲ್ಲಿ ಬರುವ ಅಣೆಕಟ್ಟು ಪ್ರದೇಶದ ಆವರಣದಲ್ಲಿ ಕೆಬಿಜೆಎನ್ಎಲ್ ವಿವಿಧ ಹಂತದ ಕಚೇರಿಗಳ ಆವರಣ, ವಸತಿ ಗೃಹ, ಶಾಲಾ ಕಾಲೇಜು ಆವರಣ ಹಾಗೂ ಕಾಲುವೆ ಜಾಗಗಳಲ್ಲಿನ ಹೂಳ, ಮುಳ್ಳುಕಂಟಿ, ಕಸವನ್ನು ತೆರವುಗೊಳಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗಿದೆ’ ಎಂದು ಮುಖ್ಯ ಎಂಜಿನಿಯರ್‌ ಆರ್.ಮಂಜುನಾಥ ಹೇಳಿದರು.

‘ಅಭಿಯಾನದಲ್ಲಿ ಅಧಿಕಾರಿ ವರ್ಗದವರು, ಸಿಬ್ಬಂದಿ, ಗ್ರಾಮಸ್ಥರು, ಸಂಘ ಸಂಸ್ಥೆಯವರು ಸ್ವಯಂಪ್ರೇರಿತರಾಗಿ ಭಾಗಿಯಾಗಿ ಸ್ವಚ್ಛತಾ ಅಭಿಯಾನ ಯಶಸ್ವಿಗೆ ಕೈಜೋಡಿಸುವ ಮೂಲಕ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ಅಭಿನಂದನೆ’ ಎಂದರು.

ಅಧೀಕ್ಷಕ ಎಂಜಿನಿಯರ್‌ ರಮೇಶ ಜಿ ರಾಠೋಡ, ಇಇ ಎಂ.ತಂಬಿದೊರೆ, ಅಶೋಕರೆಡ್ಡಿ ಪಾಟೀಲ, ಸುರೇಂದ್ರ ರೆಡ್ಡಿ, ಎಚ್.ರವಿಕುಮಾರ, ಟಿ.ಎ.ಅಜಿತ್ ಕುಮಾರ, ರಮೇಶ ಜಾಧವ, ಎಇಇ ಪ್ರಭಾಕರ, ಅಮರೇಗೌಡ ಬಯ್ಯಾಪೂರ, ಶಂಕರ ಹಡಲಗೇರಿ, ಶಿವರಾಜ ಪಾಟೀಲ, ರಿಜಿಸ್ಟರ್‌ ಆದಂಶಫೀ ಸೇರಿ ಅರಣ್ಯ ಇಲಾಖೆ, ಜಲಾಶಯ ಭದ್ರತಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು. 

ನಾರಾಯಣಪುರ ಭಾನುವಾರ ಬಸವ ಸಾಗರ ಜಲಾಶಯದಲ್ಲಿ ಮುಖ್ಯ ಎಂಜಿನೀಯರ ನೇತೃತ್ವದಲ್ಲಿ ಹುಣಸಗಿರೋಡಲಬಂಡಾ ಮತ್ತು ನಾರಾಯಣಪುರ ಅಧಿಕಾರಿ ವರ್ಗದವರು ಸ್ವಚ್ಛತಾ ಕಾರ್ಯ ನಡೆಸಿದರು
ನಾರಾಯಣಪುರ ಭಾನುವಾರ ಬಸವ ಸಾಗರ ಜಲಾಶಯದಲ್ಲಿ ಮುಖ್ಯ ಎಂಜಿನೀಯರ ನೇತೃತ್ವದಲ್ಲಿ ಹುಣಸಗಿರೋಡಲಬಂಡಾ ಮತ್ತು ನಾರಾಯಣಪುರ ಅಧಿಕಾರಿ ವರ್ಗದವರು ಸ್ವಚ್ಛತಾ ಕಾರ್ಯ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT