ಸಮೀಪದ ಕಾಚಾಪೂರ ಗ್ರಾಮದಲ್ಲಿ ಮಧ್ಯಾಹ್ನ ಬಸಮ್ಮ(34) ಮತ್ತು ಆಕೆಯ ಪ್ರಿಯಕರ ನಾಡಗೌಡ (36) ಹೊಲದಲ್ಲಿ ಜತೆಯಲ್ಲಿ ಇದ್ದಾಗ ಮಲ್ಲಣ್ಣ ಮಾರಕಾಸ್ತ್ರಗಳಿಂದ ಇರಿದು ಇಬ್ಬರನ್ನೂ ಹತ್ಯೆ ಮಾಡಿದ್ದಾನೆ. ಮಲ್ಲಣ್ಣನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಟಿ.ಮಂಜುನಾಥ, ಪಿಎಸ್ಐ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.