<p><strong>ಕೆಂಭಾವಿ:</strong> ಪಟ್ಟಣಕ್ಕೆ ಸರಿಯಾದ ರೀತಿಯಲ್ಲಿ ಬಸ್ಗಳನ್ನು ಓಡಿಸುವಂತೆ ಒತ್ತಾಯಿಸಿ ಶನಿವಾರ ಬಸ್ ನಿಲ್ದಾಣದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.</p>.<p>ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ನೂರುಲ್ಲಾಖಾನ ಬಾಬಾ, ಪುರಸಭೆ ಕೇಂದ್ರಸ್ಥಾನವಾದ ಪಟ್ಟಣಕ್ಕೆ ಶಹಾಪುರ ಮತ್ತು ಸುರಪುರ ಘಟಕದಿಂದ ಬಸ್ಗಳ ಓಡಾಟ ಅತೀ ಕಡಿಮೆಯಾಗಿದೆ. ಇಲ್ಲಿಂದ ದೂರದ ಪಟ್ಟಣಕ್ಕೆ ತೆರಳುವ ಪ್ರಯಾಣಿಕರಿಗೆ ಬಸ್ ಸಿಗದೆ ಅನಿವಾರ್ಯವಾಗಿ ಬೇರೆ ನಗರಕ್ಕೆ ತೆರಳಿ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಇಲ್ಲಿಂದ ಹೆಚ್ಚಿನ ಬಸ್ಗಳನ್ನು ಓಡಿಸಬೇಕು’ ಎಂದು ಒತ್ತಾಯಿಸಿದರು.</p>.<p>ಸಮಿತಿಯ ಇನ್ನೋರ್ವ ಸಂಚಾಲಕ ಎಚ್.ಆರ್.ಬಡಿಗೇರ ಮಾತನಾಡಿ, ‘ತಾಳಿಕೋಟಿ, ಶಹಾಪುರ, ಸುರಪುರ ಪಟ್ಟಣಗಳಿಂದ ಬರುವ ಬಸ್ಗಳು ಸಂಜೀವನಗರ, ಅಂಬಿಗರ ಚೌಡಯ್ಯ ವೃತ್ತ, ಸಮುದಾಯ ಆರೋಗ್ಯ ಕೇಂದ್ರ, ಡಾ.ಬಿ.ಆರ್. ಅಂಬೇಡ್ಕರ್ ಚೌಕ್ ಮಾರ್ಗವಾಗಿ ಬರಬೇಕು ಎಂಬ ಇಲಾಖೆ ನಿಯಮವಿದ್ದರೂ ಚಾಲಕ, ನಿರ್ವಾಹಕರು ನೇರವಾಗಿ ಬಸ್ಗಳನ್ನು ಬಸ್ ನಿಲ್ದಾಣಕ್ಕೆ ತರುತ್ತಿದ್ದು, ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಲಾಗುವುದು’ ಎಂದರು.</p>.<p>ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಅಧಿಕಾರಿ ಮಲ್ಲಯ್ಯ, ಎಲ್ಲ ಬಸ್ಸುಗಳನ್ನು ಪಟ್ಟಣದ ಒಳಮಾರ್ಗದಲ್ಲಿ ಬರುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗುವುದು. ಈ ನಿಯಮ ಉಲ್ಲಂಘಿಸಿದರೆ ಸ್ಥಳೀಯ ನಿಯಂತ್ರಕರನ್ನೇ ಹೊಣೆಗಾರರನ್ನಾಗಿ ಮಾಡಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.</p>.<p>ನಿಯಂತ್ರಾಣಾಧಿಕಾರಿ ಸಿದ್ಧನಗೌಡ, ತನಿಖಾಧಿಕಾರಿ, ಬಸನಗೌಡ ಪಾಟೀಲ, ಶಿವಶಂಕರ ಪಾಟೀಲ, ಜಹಾಂಗೀರ ಅಲಿ, ಯೂನಸ್ ಹೊಸಮನಿ, ಸಿದ್ದು ಮಾಳಳ್ಳಿ, ರಹೆಮಾನ ವಡಕೇರಿ, ಭಾಗಪ್ಪ ಮಸರಕಲ್, ರಜಾಕ ಸಾಸನೂರ, ಬಂದೇನವಾಜ ನಾಲತವಾಡ, ಉದಯಕುಮಾರ ಕುಲಕರ್ಣಿ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ:</strong> ಪಟ್ಟಣಕ್ಕೆ ಸರಿಯಾದ ರೀತಿಯಲ್ಲಿ ಬಸ್ಗಳನ್ನು ಓಡಿಸುವಂತೆ ಒತ್ತಾಯಿಸಿ ಶನಿವಾರ ಬಸ್ ನಿಲ್ದಾಣದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.</p>.<p>ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ನೂರುಲ್ಲಾಖಾನ ಬಾಬಾ, ಪುರಸಭೆ ಕೇಂದ್ರಸ್ಥಾನವಾದ ಪಟ್ಟಣಕ್ಕೆ ಶಹಾಪುರ ಮತ್ತು ಸುರಪುರ ಘಟಕದಿಂದ ಬಸ್ಗಳ ಓಡಾಟ ಅತೀ ಕಡಿಮೆಯಾಗಿದೆ. ಇಲ್ಲಿಂದ ದೂರದ ಪಟ್ಟಣಕ್ಕೆ ತೆರಳುವ ಪ್ರಯಾಣಿಕರಿಗೆ ಬಸ್ ಸಿಗದೆ ಅನಿವಾರ್ಯವಾಗಿ ಬೇರೆ ನಗರಕ್ಕೆ ತೆರಳಿ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಇಲ್ಲಿಂದ ಹೆಚ್ಚಿನ ಬಸ್ಗಳನ್ನು ಓಡಿಸಬೇಕು’ ಎಂದು ಒತ್ತಾಯಿಸಿದರು.</p>.<p>ಸಮಿತಿಯ ಇನ್ನೋರ್ವ ಸಂಚಾಲಕ ಎಚ್.ಆರ್.ಬಡಿಗೇರ ಮಾತನಾಡಿ, ‘ತಾಳಿಕೋಟಿ, ಶಹಾಪುರ, ಸುರಪುರ ಪಟ್ಟಣಗಳಿಂದ ಬರುವ ಬಸ್ಗಳು ಸಂಜೀವನಗರ, ಅಂಬಿಗರ ಚೌಡಯ್ಯ ವೃತ್ತ, ಸಮುದಾಯ ಆರೋಗ್ಯ ಕೇಂದ್ರ, ಡಾ.ಬಿ.ಆರ್. ಅಂಬೇಡ್ಕರ್ ಚೌಕ್ ಮಾರ್ಗವಾಗಿ ಬರಬೇಕು ಎಂಬ ಇಲಾಖೆ ನಿಯಮವಿದ್ದರೂ ಚಾಲಕ, ನಿರ್ವಾಹಕರು ನೇರವಾಗಿ ಬಸ್ಗಳನ್ನು ಬಸ್ ನಿಲ್ದಾಣಕ್ಕೆ ತರುತ್ತಿದ್ದು, ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಲಾಗುವುದು’ ಎಂದರು.</p>.<p>ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಅಧಿಕಾರಿ ಮಲ್ಲಯ್ಯ, ಎಲ್ಲ ಬಸ್ಸುಗಳನ್ನು ಪಟ್ಟಣದ ಒಳಮಾರ್ಗದಲ್ಲಿ ಬರುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗುವುದು. ಈ ನಿಯಮ ಉಲ್ಲಂಘಿಸಿದರೆ ಸ್ಥಳೀಯ ನಿಯಂತ್ರಕರನ್ನೇ ಹೊಣೆಗಾರರನ್ನಾಗಿ ಮಾಡಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.</p>.<p>ನಿಯಂತ್ರಾಣಾಧಿಕಾರಿ ಸಿದ್ಧನಗೌಡ, ತನಿಖಾಧಿಕಾರಿ, ಬಸನಗೌಡ ಪಾಟೀಲ, ಶಿವಶಂಕರ ಪಾಟೀಲ, ಜಹಾಂಗೀರ ಅಲಿ, ಯೂನಸ್ ಹೊಸಮನಿ, ಸಿದ್ದು ಮಾಳಳ್ಳಿ, ರಹೆಮಾನ ವಡಕೇರಿ, ಭಾಗಪ್ಪ ಮಸರಕಲ್, ರಜಾಕ ಸಾಸನೂರ, ಬಂದೇನವಾಜ ನಾಲತವಾಡ, ಉದಯಕುಮಾರ ಕುಲಕರ್ಣಿ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>