<p><strong>ಸುರಪುರ:</strong> ‘ನಾವು ಕಷ್ಪಪಟ್ಟು ಎಷ್ಟೆ ಹಣ ಗಳಿಸಿದರೂ ಇಲ್ಲೆ ಬಿಟ್ಟು ಹೋಗುತ್ತೇವೆ. ನಮ್ಮ ಸಂಪಾದನೆಯ ಕೆಲ ಭಾಗವನ್ನಾದರೂ ದೇಣಿಗೆ ನೀಡಿದರೆ ಜನ್ಮ ಸಾರ್ಥಕವಾಗುತ್ತದೆ’ ಎಂದು ಭೂದಾನಿ ಖಾಲೀದ್ ಅಹ್ಮದ್ ತಾಳಿಕೋಟಿ ಹೇಳಿದರು.</p>.<p>ರಂಗಂಪೇಟೆಯ ಮೌಲಾನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಈಚೆಗೆ ಭೂದಾನ ಮಾಡಿದ ತಮಗೆ ಮುಸ್ಲಿಂ ಸಮಾಜದ ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಶಿಕ್ಷಣದಲ್ಲಿ ಶಕ್ತಿ ಅಡಗಿದೆ. ಕಷ್ಟಪಟ್ಟು ಓದುವ ವಿದ್ಯಾರ್ಥಿಗೆ ಖಂಡಿತ ಉಜ್ವಲ ಭವಿಷ್ಯ ಇರುತ್ತದೆ. ನಾನು ಓದಿರುವುದು ಕಡಿಮೆ. ನನ್ನ ಎಲ್ಲ ಮಕ್ಕಳು ಚೆನ್ನಾಗಿ ಓದಿ ಉನ್ನತ ಸೇವೆಗಳಲ್ಲಿ ಇದ್ದಾರೆ. ಶಿಕ್ಷಣಕ್ಕೆ ನೀಡಿದ ದಾನ ಸರ್ವಶ್ರೇಷ್ಠ’ ಎಂದರು.</p>.<p>ವಕೀಲ ಅಮ್ಜದ್ಖಾನ್ ಭಾಗವಾನ ಮಾತನಾಡಿ, ‘ವೃತ್ತಿಯಿಂದ ವಕೀಲನಾದರೂ ಬಿಡುವಿನ ಸಮಯದಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ. ನೋಟರಿ ಆಗಿರುವುದರಿಂದ ಬಡವರ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಇದನ್ನು ಗಮನಿಸಿ ಪ್ರೆಸ್ ಕ್ಲಬ್ ಈಚೆಗೆ ನನಗೆ ಸೇವಾರತ್ನ ಪ್ರಶಸ್ತಿ ನೀಡಿದೆ’ ಎಂದರು.</p>.<p>ಚಿನ್ನುಮಿಯಾ ಪಟೇಲ ಮಾತನಾಡಿ, ‘ಮೂಲತಃ ಜೇವರ್ಗಿ ತಾಲ್ಲೂಕಿನವನಾದ ನನಗೆ ಸುರಪುರದ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಲಭಿಸಿತು. ನನ್ನ ಕೈಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.</p>.<p>ಸಮಾಜದ ಮುಖಂಡರಾದ ಖಾಜಾ ಖಲೀಲ ಅಹ್ಮದ್ ಅರಿಕೇರಿ, ರಬ್ಬಾನಿ ಮೋಲಿಸಾಬ, ದಾವುದ್ ಇಬ್ರಾಹಿಂ ಪಠಾಣ, ಅಬಿದ ಪಗಡಿ, ಎಂ. ಪಟೇಲ, ಖಾಜಾ ಅಜ್ಮೀರ್ ಖುರೇಶಿ, ಇಮಾಮಸಾಬ ವಾಗಣಗೇರಿ, ಚಾಂದಸಾಬ ಕುಂಬಾರಪೇಟ, ಫಜಲ ನಾಸಿ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ನಾವು ಕಷ್ಪಪಟ್ಟು ಎಷ್ಟೆ ಹಣ ಗಳಿಸಿದರೂ ಇಲ್ಲೆ ಬಿಟ್ಟು ಹೋಗುತ್ತೇವೆ. ನಮ್ಮ ಸಂಪಾದನೆಯ ಕೆಲ ಭಾಗವನ್ನಾದರೂ ದೇಣಿಗೆ ನೀಡಿದರೆ ಜನ್ಮ ಸಾರ್ಥಕವಾಗುತ್ತದೆ’ ಎಂದು ಭೂದಾನಿ ಖಾಲೀದ್ ಅಹ್ಮದ್ ತಾಳಿಕೋಟಿ ಹೇಳಿದರು.</p>.<p>ರಂಗಂಪೇಟೆಯ ಮೌಲಾನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಈಚೆಗೆ ಭೂದಾನ ಮಾಡಿದ ತಮಗೆ ಮುಸ್ಲಿಂ ಸಮಾಜದ ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಶಿಕ್ಷಣದಲ್ಲಿ ಶಕ್ತಿ ಅಡಗಿದೆ. ಕಷ್ಟಪಟ್ಟು ಓದುವ ವಿದ್ಯಾರ್ಥಿಗೆ ಖಂಡಿತ ಉಜ್ವಲ ಭವಿಷ್ಯ ಇರುತ್ತದೆ. ನಾನು ಓದಿರುವುದು ಕಡಿಮೆ. ನನ್ನ ಎಲ್ಲ ಮಕ್ಕಳು ಚೆನ್ನಾಗಿ ಓದಿ ಉನ್ನತ ಸೇವೆಗಳಲ್ಲಿ ಇದ್ದಾರೆ. ಶಿಕ್ಷಣಕ್ಕೆ ನೀಡಿದ ದಾನ ಸರ್ವಶ್ರೇಷ್ಠ’ ಎಂದರು.</p>.<p>ವಕೀಲ ಅಮ್ಜದ್ಖಾನ್ ಭಾಗವಾನ ಮಾತನಾಡಿ, ‘ವೃತ್ತಿಯಿಂದ ವಕೀಲನಾದರೂ ಬಿಡುವಿನ ಸಮಯದಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ. ನೋಟರಿ ಆಗಿರುವುದರಿಂದ ಬಡವರ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಇದನ್ನು ಗಮನಿಸಿ ಪ್ರೆಸ್ ಕ್ಲಬ್ ಈಚೆಗೆ ನನಗೆ ಸೇವಾರತ್ನ ಪ್ರಶಸ್ತಿ ನೀಡಿದೆ’ ಎಂದರು.</p>.<p>ಚಿನ್ನುಮಿಯಾ ಪಟೇಲ ಮಾತನಾಡಿ, ‘ಮೂಲತಃ ಜೇವರ್ಗಿ ತಾಲ್ಲೂಕಿನವನಾದ ನನಗೆ ಸುರಪುರದ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಲಭಿಸಿತು. ನನ್ನ ಕೈಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.</p>.<p>ಸಮಾಜದ ಮುಖಂಡರಾದ ಖಾಜಾ ಖಲೀಲ ಅಹ್ಮದ್ ಅರಿಕೇರಿ, ರಬ್ಬಾನಿ ಮೋಲಿಸಾಬ, ದಾವುದ್ ಇಬ್ರಾಹಿಂ ಪಠಾಣ, ಅಬಿದ ಪಗಡಿ, ಎಂ. ಪಟೇಲ, ಖಾಜಾ ಅಜ್ಮೀರ್ ಖುರೇಶಿ, ಇಮಾಮಸಾಬ ವಾಗಣಗೇರಿ, ಚಾಂದಸಾಬ ಕುಂಬಾರಪೇಟ, ಫಜಲ ನಾಸಿ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>