<p>ಹುಣಸಗಿ: ನಾನು ನನ್ನದು ಎಂಬ ಭಾವ ಹಾಗೂ ಪ್ರಪಂಚದಿಂದ ಸಂಪೂರ್ಣ ಮುಕ್ತನಾಗಿ ನಿರಂತರ ಸಾಧನೆ ಮಾಡಿದಾಗ ಮಾತ್ರ ಆತ್ಮ ಸಾಕ್ಷಾತ್ಕಾರವಾಗುತ್ತದೆ ಎಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಶಿರಳಗಿಯ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು.</p>.<p>ಹುಣಸಗಿ ತಾಲೂಕಿನ ಬೆನಕನಹಳ್ಳಿಯಲ್ಲಿ ಡಬ್ಬೇರಮಡುವು ವಿದ್ಯಾನಂದ ಶರಣರ 18 ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಸತ್ಸಂಗ ಕೂಟದಲ್ಲಿ 'ಆತ್ಮ ಪರಮಾತ್ಮ, ಹಾಗೂ ಕಠೋಪನಿಷತ್ತು' ಈ ವಿಷಯದ ಕುರಿತಂತೆ ಪ್ರವಚನ ನೀಡಿದರು.</p>.<p>ನಚಿಕೇತ ಹಾಗೂ ಯಮಧರ್ಮರಾಯನ ನಡುವೆ ನಡೆದ ಸಂವಾದದ ಕುರಿತು ವಿವರಿಸುತ್ತಾ ಯಮನಿಂದ ಆತ್ಮಜ್ಞಾನ ತಿಳಿದುಕೊಂಡ ದೃಷ್ಟಾಂತದ ಬಗ್ಗೆ ತಿಳಿಸಿದರು. ತನ್ನನ್ನು ತಾನು ಅರಿತುಕೊಳ್ಳುವದೇ ವೇದ, ಉಪನಿಷತ್ತುಗಳು, ಪುರಾಣಗಳ ಸಾರ ಎಂದು ತಿಳಿಸಿದರು.</p>.<p>ಬಾಗಲಕೋಟೆ ಜಿಲ್ಲೆಯ ಕೃಷ್ಣಶಾಸ್ತ್ರಿಜಿ ಮಾತನಾಡಿ, ಶ್ರೀರಾಮನು ಕಾಡಿಗೆ ತೆರಳಿದ ಪ್ರಸಂಗದ ಕುರಿತು ಹಾಗೂ ಜೀವನದ ಬಯಕೆ ಮತ್ತು ಸಾಧನ ಮಾರ್ಗದ ಅಡೆತಡೆಗಳ ಕುರಿತು ವಿವರವಾಗಿ ವಿವರಿಸಿದರು. ಮಹಾಬೋಧಾಲಯದ ಶರಣ ದೇವಾನಂದ ಶರಣರು ಅಧ್ಯಕ್ಷತೆ ವಹಿಸಿದ್ದರು.</p>.<p>ವಚನ ಪ್ರವೀಣೆ ಮಾತೆ ಶ್ರೀದೇವಿತಾಯಿ ಜಮಖಂಡಿ, ನಗನೂರಿನ ಸದಾಶಿವರೆಡ್ಡಿ, ಹನುಮಂತರಾಯ ಕಾಕರಗಲ್, ದ್ಯಾಮನಾಳದ ಮನೋಹರರಾವ ಕುಲಕರ್ಣಿ, ಶರಭೆಂದ್ರಸ್ವಾಮೀಜಿ , ಶಂಕ್ರಣ್ಣ ಹುಣಶ್ಯಾಳ, ಕಾಮನಕೇರಿಯ ಪರಮಾನಂದ ಮಹಾರಾಜ, ಯೋಗ ವಿಜ್ಞಾನದ ಪಿ.ರುದ್ರಪ್ಪ ಕುರಕುಂದ ಇತರರು ಮಾತನಾಡಿದರು.</p>.<p>ಜಾಲಹಳ್ಳಿಯ ಡಾ. ರಾಜೇಶ್ವರಿ ಮಲ್ಕಾಪೂರ, ಡಾ. ನಾಗರಾಜ ಮಲ್ಕಾಪೂರ ಅವರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಆಹಾರವೇ ಔಷಧಿ ಕುರಿತು ಡಾ.ಎಂ.ಜಿ.ಮುಳಕೂರ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸಗಿ: ನಾನು ನನ್ನದು ಎಂಬ ಭಾವ ಹಾಗೂ ಪ್ರಪಂಚದಿಂದ ಸಂಪೂರ್ಣ ಮುಕ್ತನಾಗಿ ನಿರಂತರ ಸಾಧನೆ ಮಾಡಿದಾಗ ಮಾತ್ರ ಆತ್ಮ ಸಾಕ್ಷಾತ್ಕಾರವಾಗುತ್ತದೆ ಎಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಶಿರಳಗಿಯ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು.</p>.<p>ಹುಣಸಗಿ ತಾಲೂಕಿನ ಬೆನಕನಹಳ್ಳಿಯಲ್ಲಿ ಡಬ್ಬೇರಮಡುವು ವಿದ್ಯಾನಂದ ಶರಣರ 18 ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಸತ್ಸಂಗ ಕೂಟದಲ್ಲಿ 'ಆತ್ಮ ಪರಮಾತ್ಮ, ಹಾಗೂ ಕಠೋಪನಿಷತ್ತು' ಈ ವಿಷಯದ ಕುರಿತಂತೆ ಪ್ರವಚನ ನೀಡಿದರು.</p>.<p>ನಚಿಕೇತ ಹಾಗೂ ಯಮಧರ್ಮರಾಯನ ನಡುವೆ ನಡೆದ ಸಂವಾದದ ಕುರಿತು ವಿವರಿಸುತ್ತಾ ಯಮನಿಂದ ಆತ್ಮಜ್ಞಾನ ತಿಳಿದುಕೊಂಡ ದೃಷ್ಟಾಂತದ ಬಗ್ಗೆ ತಿಳಿಸಿದರು. ತನ್ನನ್ನು ತಾನು ಅರಿತುಕೊಳ್ಳುವದೇ ವೇದ, ಉಪನಿಷತ್ತುಗಳು, ಪುರಾಣಗಳ ಸಾರ ಎಂದು ತಿಳಿಸಿದರು.</p>.<p>ಬಾಗಲಕೋಟೆ ಜಿಲ್ಲೆಯ ಕೃಷ್ಣಶಾಸ್ತ್ರಿಜಿ ಮಾತನಾಡಿ, ಶ್ರೀರಾಮನು ಕಾಡಿಗೆ ತೆರಳಿದ ಪ್ರಸಂಗದ ಕುರಿತು ಹಾಗೂ ಜೀವನದ ಬಯಕೆ ಮತ್ತು ಸಾಧನ ಮಾರ್ಗದ ಅಡೆತಡೆಗಳ ಕುರಿತು ವಿವರವಾಗಿ ವಿವರಿಸಿದರು. ಮಹಾಬೋಧಾಲಯದ ಶರಣ ದೇವಾನಂದ ಶರಣರು ಅಧ್ಯಕ್ಷತೆ ವಹಿಸಿದ್ದರು.</p>.<p>ವಚನ ಪ್ರವೀಣೆ ಮಾತೆ ಶ್ರೀದೇವಿತಾಯಿ ಜಮಖಂಡಿ, ನಗನೂರಿನ ಸದಾಶಿವರೆಡ್ಡಿ, ಹನುಮಂತರಾಯ ಕಾಕರಗಲ್, ದ್ಯಾಮನಾಳದ ಮನೋಹರರಾವ ಕುಲಕರ್ಣಿ, ಶರಭೆಂದ್ರಸ್ವಾಮೀಜಿ , ಶಂಕ್ರಣ್ಣ ಹುಣಶ್ಯಾಳ, ಕಾಮನಕೇರಿಯ ಪರಮಾನಂದ ಮಹಾರಾಜ, ಯೋಗ ವಿಜ್ಞಾನದ ಪಿ.ರುದ್ರಪ್ಪ ಕುರಕುಂದ ಇತರರು ಮಾತನಾಡಿದರು.</p>.<p>ಜಾಲಹಳ್ಳಿಯ ಡಾ. ರಾಜೇಶ್ವರಿ ಮಲ್ಕಾಪೂರ, ಡಾ. ನಾಗರಾಜ ಮಲ್ಕಾಪೂರ ಅವರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಆಹಾರವೇ ಔಷಧಿ ಕುರಿತು ಡಾ.ಎಂ.ಜಿ.ಮುಳಕೂರ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>