ಕೆಬಿಜೆಎನ್ಎಲ್ ಎಇಇ ಬಸವಣ್ಣಪ್ಪ ಮಾತನಾಡಿ, ಬ್ಯಾರೇಜ್ನಲ್ಲಿ ಅಳವಡಿಸಲಾದ ಗೇಟ್ಗಳು ತುಕ್ಕು ಹಿಡಿದಿದ್ದರಿಂದ ತೆಗೆಯಲು ತೊಂದರೆಯಾಗಿದೆ. ಶೇಕಡ 40 ರಷ್ಟು ಗೇಟ್ಗಳನ್ನು ತೆಗೆಯಲಾಗಿತ್ತು. ಉಳಿದ ಗೇಟ್ಗಳು ತೆಗೆಯುವ ಕಾರ್ಯ ಮುಂದುವರೆದಿತ್ತು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದ ಪರಿಣಾಮ ಉಳಿದ ಗೇಟ್ಗಳು ತೆಗೆಯಲಾಗಲಿಲ್ಲ ಎಂದು ತಿಳಿಸಿದರು.