ಖರೀದಿ ನಂತರ ಬಾಕಿ ನೀಡುವುದಿಲ್ಲ ಎಂಬುದಾಗಿ ರೈತರು ದೂರುತ್ತಾರೆ. ಈ ಕಾರಣಕ್ಕಾಗಿಯೇ ರೈತರಿಗೆ ಸಂಕಷ್ಟ ನೀಡಬಾರದು ಎಂಬ ಉದ್ದೇಶದಿಂದ ಆವರ್ತನಿಧಿಯಿಂದ ₹20 ಕೋಟಿ ಮುಂಗಡ ಹಣ ಬಿಡುಗಡೆ ಮಾಡಿದೆ. ಈ ಹಣವನ್ನು ಮಾರ್ಕ್ಫೆಡ್ ಸಂಸ್ಥೆಗೆ ತತಕ್ಷಣ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬಿಡುಗಡೆ ಮಾಡುವಂತೆ ಕೇಂದ್ರ ಸೂಚಿಸಿದೆ. ಹಾಗಾಗಿ, ಖರೀದಿ ನಂತರ ರೈತರಿಗೆ ತಕ್ಷಣ ಹಣ ದೊರೆಯಲಿದೆ. ಹಾಗಾಗಿ, ರೈತರು ಖರೀದಿ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ರೈತರಿಗೆ ಮನವಿ ಮಾಡಿದ್ದಾರೆ.