‘ಬಸವ, ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಬರಹಗಾರರಾಗಿದ್ದರು. ಈ ಬರಹಗಾರರಿಗೆ ಬರವಣಿಗೆಯ ಬದ್ಧತೆ ಮತ್ತು ಸಮಾಜ ಏಳಿಗೆಯ ಬಗ್ಗೆ ಕಳಕಳಿ ಇದುದ್ದರಿಂದಲೇ ಇಂದು ಸಮಾಜದ ಪ್ರಗತಿ ಸಾಧ್ಯವಾಗಿದೆ. ಬಸವಣ್ಣ– ಕಲ್ಯಾಣ ರಾಜ್ಯ, ಗಾಂಧಿ– ರಾಮ ರಾಜ್ಯ, ಕನಕದಾಸರ– ರಾಗಿ ರಾಜ್ಯ, ಅಂಬೇಡ್ಕರ್– ಪ್ರಜಾಪ್ರಭುತ್ವ ರಾಜ್ಯ, ಮಾರ್ಕ್ಸ್ –ಕಾರ್ಮಿಕ ರಾಜ್ಯ ಕಟ್ಟುವ ಕನಸಿತ್ತು. ಅವರಿಗೆ ಇಂಥಾ ಕನಸಿನ ಮಾರ್ಗದಲ್ಲಿ ಬದುಕು– ಬರಹ ಮಾಡಿದ್ದರಿಂದಲೇ ಇಂದು ಅವರು ಜನರಲ್ಲಿ ಸ್ಥಾಯಿರೂಪ ಪಡೆದಿದ್ದಾರೆ. ಅವರ ಸಾಹಿತ್ಯ ಜಂಗಮ ರೀತಿಯಲ್ಲಿ ಉಳಿದುಕೊಂಡಿದೆ’ ಎಂದು ವಿಶ್ಲೇಷಿಸಿದರು.