ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಗಡಿಗ್ರಾಮಕ್ಕೆ ಶೀಘ್ರ ಜಿಲ್ಲಾಧಿಕಾರಿ ಹಾಗೂ ಸಿಇಒ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ.
ಉಮೇಶ.ಕೆ ಮುದ್ನಾಳ, ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟಾ ಕಾರ್ಯದರ್ಶಿ
ಚರಂಡಿ ಮತ್ತು ಜೋತು ಬಿದ್ದ ವಿದ್ಯುತ್ ತಂತಿ ಸಮಸ್ಯೆಗಳು ಗ್ರಾಮದ ಜನರನ್ನು ಹೈರಾಣಾಗಿಸಿವೆ. ಸಂಬಂಧಿಸಿದವರು ಆದಷ್ಟು ಬೇಗ ಸರಿಪಡಿಸಬೇಕು. ಇಲ್ಲದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಜಗದೀಶ, ಗ್ರಾಮಸ್ಥ
ಈಗಾಗಲೇ ಗ್ರಾಮಕ್ಕೆ ಸಿಇಒ ಅವರು ಭೇಟಿ ನೀಡಿ ಪಿಡಿಒ ಅವರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಚರಂಡಿ, ವಿದ್ಯುತ್ ತಂತಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಶೀಘ್ರದಲ್ಲಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ
ರಾಘವರೆಡ್ಡಿ ನಸಲವಾಯಿ, ಅಧ್ಯಕ್ಷ ಗ್ರಾ.ಪಂ ಅನಪುರ
ಸೈದಾಪುರ ವಲಯದ ನಸಲವಾಯಿ ಗ್ರಾಮದಲ್ಲಿ ಚರಂಡಿಯಲ್ಲಿ ಕಸ-ಕಡ್ಡಿ ತುಂಬಿಕೊಂಡಿರುವುದು.