<p><strong>ಯಾದಗಿರಿ</strong>: ನೆರೆಯ ಜಿಲ್ಲೆಗಳಲ್ಲಿ ಮಳೆ ಕಾರಣ ತರಕಾರಿ ದರ ಏರಿಕೆಯಾಗಿದ್ದು, ಆ ಜಿಲ್ಲೆಗಳಿಂದ ಆವಕವಾಗುವ ಕಾಯಿಪಲ್ಲೆ ನಮ್ಮಲ್ಲಿಯೂ ಬೆಲೆ ಅಧಿಕವಾಗಿದೆ.</p>.<p>ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದ ತರಕಾರಿ ಬಿಡಿಸಲು ಅಲ್ಲಿ ಸಾಧ್ಯವಾಗಿಲ್ಲ. ಅದರ ಪರಿಣಾಮ ಜಿಲ್ಲೆಗೂ ತಟ್ಟಿದೆ. ಅಲ್ಲಿಂದ ಬರುವ ತರಕಾರಿ ದರ ಏರಿಕೆಯಾಗಿದೆ.</p>.<p>ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ತರಕಾರಿಗಳಿಗೆ ಅನುಕೂಲವಾದರೂ ಬೆಳೆ ಅಧಿಕವಿಲ್ಲದಿದ್ದರಿಂದ ಬೇರೆ ಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ.</p>.<p class="Subhead">ಟೊಮೆಟೊ ದರ ಅಧಿಕವಾಗುವ ಸಾಧ್ಯತೆ: ಟೊಮೆಟೊ ತರಕಾರಿ ಕಲಬುರಗಿ ಮತ್ತು ರಾಯಚೂರು ಜಿಲ್ಲೆ ಯಿಂದ ಆವಕವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿಗಳ ಮಾತಾಗಿದೆ.</p>.<p>ಇನ್ನೂ ತರಕಾರಿ ಬೆಲೆ ಒಂದು ಕೆಜಿಗೆ ₹40ರಿಂದ 80 ರ ತನಕ ಬೆಲೆ ಇದೆ. ಎಲ್ಲ ತರಕಾರಿಗಳು ₹10ರಿಂದ ₹20 ಅಧಿಕವಾಗಿದೆ. ಕಳೆದ ವಾರದಿಂದ ನುಗ್ಗೆಕಾಯಿ ದರ ಅಧಿಕವಾಗಿದ್ದು, ಕೆಜಿಗೆ ₹180 ರಿಂದ ₹200 ಬೆಲೆ ಇದೆ. ಇದು ಕೂಡ ಚಿಲ್ಲರೆ ಅಂಗಡಿಗಳಲ್ಲಿ ಸಿಗುತ್ತಿಲ್ಲ. ಬೆಳ್ಳುಳ್ಳಿ ₹90–100 ಕರಿಬೇವು ₹100 ಕೆಜಿ ಇದೆ.</p>.<p class="Subhead">ಸೊಪ್ಪುಗಳ ದರ: ತರಕಾರಿಗಳ ದರ ಅಧಿಕವಾದರೂ ಸೊಪ್ಪುಗಳ ಬೆಲೆ ಏರಿಕೆಯಾಗಿಲ್ಲ. ಕಳೆದ ವಾರದಂತೆ ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.</p>.<p>ಮೆಂತೆ ಸೊಪ್ಪು ದೊಡ್ಡ ಗಾತ್ರದು ₹25–30, ಪಾಲಕ್ ಸೊಪ್ಪು ಒಂದು ಕಟ್ಟು ₹10, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹ 5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ದೊಡ್ಡ ಗಾತ್ರದು ಕಟ್ಟು ₹10–15, ಕೊತಂಬರಿ ಸೊಪ್ಪು ದೊಡ್ಡ ಗಾತ್ರದ ಒಂದು ಕಟ್ಟು ₹15–20 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹15–20 ದರ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ನೆರೆಯ ಜಿಲ್ಲೆಗಳಲ್ಲಿ ಮಳೆ ಕಾರಣ ತರಕಾರಿ ದರ ಏರಿಕೆಯಾಗಿದ್ದು, ಆ ಜಿಲ್ಲೆಗಳಿಂದ ಆವಕವಾಗುವ ಕಾಯಿಪಲ್ಲೆ ನಮ್ಮಲ್ಲಿಯೂ ಬೆಲೆ ಅಧಿಕವಾಗಿದೆ.</p>.<p>ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದ ತರಕಾರಿ ಬಿಡಿಸಲು ಅಲ್ಲಿ ಸಾಧ್ಯವಾಗಿಲ್ಲ. ಅದರ ಪರಿಣಾಮ ಜಿಲ್ಲೆಗೂ ತಟ್ಟಿದೆ. ಅಲ್ಲಿಂದ ಬರುವ ತರಕಾರಿ ದರ ಏರಿಕೆಯಾಗಿದೆ.</p>.<p>ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ತರಕಾರಿಗಳಿಗೆ ಅನುಕೂಲವಾದರೂ ಬೆಳೆ ಅಧಿಕವಿಲ್ಲದಿದ್ದರಿಂದ ಬೇರೆ ಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ.</p>.<p class="Subhead">ಟೊಮೆಟೊ ದರ ಅಧಿಕವಾಗುವ ಸಾಧ್ಯತೆ: ಟೊಮೆಟೊ ತರಕಾರಿ ಕಲಬುರಗಿ ಮತ್ತು ರಾಯಚೂರು ಜಿಲ್ಲೆ ಯಿಂದ ಆವಕವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿಗಳ ಮಾತಾಗಿದೆ.</p>.<p>ಇನ್ನೂ ತರಕಾರಿ ಬೆಲೆ ಒಂದು ಕೆಜಿಗೆ ₹40ರಿಂದ 80 ರ ತನಕ ಬೆಲೆ ಇದೆ. ಎಲ್ಲ ತರಕಾರಿಗಳು ₹10ರಿಂದ ₹20 ಅಧಿಕವಾಗಿದೆ. ಕಳೆದ ವಾರದಿಂದ ನುಗ್ಗೆಕಾಯಿ ದರ ಅಧಿಕವಾಗಿದ್ದು, ಕೆಜಿಗೆ ₹180 ರಿಂದ ₹200 ಬೆಲೆ ಇದೆ. ಇದು ಕೂಡ ಚಿಲ್ಲರೆ ಅಂಗಡಿಗಳಲ್ಲಿ ಸಿಗುತ್ತಿಲ್ಲ. ಬೆಳ್ಳುಳ್ಳಿ ₹90–100 ಕರಿಬೇವು ₹100 ಕೆಜಿ ಇದೆ.</p>.<p class="Subhead">ಸೊಪ್ಪುಗಳ ದರ: ತರಕಾರಿಗಳ ದರ ಅಧಿಕವಾದರೂ ಸೊಪ್ಪುಗಳ ಬೆಲೆ ಏರಿಕೆಯಾಗಿಲ್ಲ. ಕಳೆದ ವಾರದಂತೆ ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.</p>.<p>ಮೆಂತೆ ಸೊಪ್ಪು ದೊಡ್ಡ ಗಾತ್ರದು ₹25–30, ಪಾಲಕ್ ಸೊಪ್ಪು ಒಂದು ಕಟ್ಟು ₹10, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹ 5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ದೊಡ್ಡ ಗಾತ್ರದು ಕಟ್ಟು ₹10–15, ಕೊತಂಬರಿ ಸೊಪ್ಪು ದೊಡ್ಡ ಗಾತ್ರದ ಒಂದು ಕಟ್ಟು ₹15–20 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹15–20 ದರ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>