ಬಜೆಟ್ ಅಧಿವೇಶನದ ಬಳಿಕ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಶಿಥಿಲಗೊಂಡಿರುವ ಬಸ್ ತಂಗುದಾಣವನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಮಾಡಿಕೊಡಲಾಗುವುದು.
– ಮಂಜುನಾಥ ಜಿ.ಬಿ., ಡಿ.ಸಿ. ಕೆಕೆಆರ್ಟಿಸಿ ಯಾದಗಿರಿ
ಶಿಥಿಲಗೊಂಡ ತಂಗುದಾಣವನ್ನು ಸ್ವಚ್ಛ ಹಾಗೂ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ರಾಯಚೂರು-ಯಾದಗಿರಿ ಮಾರ್ಗವಾಗಿ ಸಂಚರಿಸುವ ಬಸ್ಗಳನ್ನು ನಿಲುಗಡೆ ಮಾಡಬೇಕು.
– ಆಂಜನೇಯ ಮಡಿವಾಳ, ಸೈದಾಪುರ ನಿವಾಸಿ
ಬಸ್ ತಂಗುದಾಣ ಸೂಕ್ತ ನಿರ್ವಹಣೆ ಕಟ್ಟಡ ಹಾಳಾಗಿದೆ. ಸುತ್ತಲು ಹುಲ್ಲು–ಕಂಟಿಗಳಲ್ಲಿ ಮುಚ್ಚಿಕೊಂಡಿದೆ. ಸಂಬಂಧಿಸಿದ ಅಧಿಕಾರಗಿಳು ಕಟ್ಟಡ ದುರಸ್ತಿಗೊಳಿಸಿ ಸ್ವಚ್ಛಗೊಳಿಸಿದರೆ ಅನುಕೂಲವಾಗುತ್ತದೆ