<p><strong>ಸೈದಾಪುರ:</strong> ಪಟ್ಟಣದ ಜನ ಮಕರ ಸಂಕ್ರಾಂತಿ ಹಬ್ಬದ ಆಚರಣೆಗಾಗಿ ಮಂಗಳವಾರ ಎಳ್ಳುಬೆಲ್ಲ, ತರಕಾರಿ, ಪೂಜಾ ಸಾಮಗ್ರಿ, ಹೂವು-ಹಣ್ಣುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದರು.</p>.<p>ಬಸವೇಶ್ವರ ವೃತ್ತದಿಂದ ರೈಲು ನಿಲ್ದಾಣ ಸಮೀಪದವರೆಗೆ, ಕನಕ ವೃತ್ತದಿಂದ ಬಸ್ ನಿಲ್ದಾಣದವರೆಗೆ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ವ್ಯಾಪಾರಿಗಳು ಕುಳಿತುಕೊಂಡಿರುವುದು ಸಾಮಾನ್ಯವಾಗಿತ್ತು.</p>.<p>ಗ್ರಾಮೀಣ ಭಾಗದಿಂದ ರೈತರು ಸಂಕ್ರಾಂತಿ ಸಂದರ್ಭದಲ್ಲಿ ಬರುವ ಬಗೆಬಗೆಯ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿರುವುದು ಕಂಡುಬಂದಿತು. ಇದರಿಂದ ಕೆಲ ಕಾಲ ಪ್ರಮುಖ ಬೀದಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಯಿತು. ಬಟ್ಟೆ, ಕಿರಾಣಿ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.</p>.<p class="Subhead">ತರಕಾರಿ ಬೆಲೆಯಲ್ಲಿ ಇಳಿಕೆ: ಟೊಮೊಟೊ, ಗೋಬಿ, ಈರುಳ್ಳಿ ₹20 ಕೆ.ಜಿಯಂತೆ ಮಾರಾಟವಾದವು. ಬದನೆಕಾಯಿ ₹40 ಕೆ.ಜಿ, ಹಿರೇಕಾಯಿ, ಮೆಣಸಿನ ಕಾಯಿ, ಸೌತೆಕಾಯಿ, ಕ್ಯಾರೆಟ್, ಬಟಾಣಿ, ಹಾಗಲಕಾಯಿ, ಅವರೆಕಾಯಿ ₹60 ಕೆ.ಜಿ, ಚವಳೆಕಾಯಿ ₹ 80 ಕೆ.ಜಿ, ಕುಂಬಳಕಾಯಿ ಒಂದಕ್ಕೆ ₹30, ಮೆಂತೆ, ಪಾಲಕ, ಕೊತ್ತಂಬರಿ, ಪುಂಡಿಪಲ್ಲೆ, ಈರುಳ್ಳಿ ತಪ್ಪಲ ₹10ನಂತೆ ಕಟ್ಟು ಮಾರಾಟವಾದವು.</p>.<p>‘ಮಾರುಕಟ್ಟೆಗೆ ಬಳಿಚಕ್ರ, ಕಿಲ್ಲನಕೇರಾ, ಕೂಡ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ತರಕಾರಿಗಳನ್ನು ಮಾರಾಟ ಮಾಡಲು ತಂದಿದ್ದರು. ಆದರೆ, ದಿನನಿತ್ಯಕ್ಕಿಂತ ಬೆಲೆಯಲ್ಲಿ ಭಾರಿ ಇಳಿಕೆಯಿಂದ ವ್ಯಾಪಾರಸ್ಥರಿಗೆ ಹಬ್ಬ ಲಾಭ ತರಲಿಲ್ಲ’ ಎಂದು ತರಕಾರಿ ವ್ಯಾಪಾರಿ ಮಲ್ಲು ಕೂಡ್ಲೂರು ಬೇಸರ ವ್ಯಕ್ತಪಡಿಸಿದರು.</p>.<p class="Subhead">ಕುಂದಿದ ಹಣ್ಣಿನ ವ್ಯಾಪಾರ: ‘ಬಾಳೆಹಣ್ಣು ಡಜನ್ಗೆ ₹40ರಿಂದ ₹50, ಸಪೋಟಾ ₹60ರಿಂದ ₹80 ಕೆ.ಜಿ, ದ್ರಾಕ್ಷಿ ₹150 ಕೆ.ಜಿ, ದಾಳಿಂಬೆ ₹200 ಕೆ.ಜಿ, ಸೇಬು ನಾಲ್ಕಕ್ಕೆ ₹100, ಖರ್ಜೂರ ₹150 ಕೆ.ಜಿ, ಬಾರೆಹಣ್ಣು ₹80 ರಿಂದ ₹100 ಕೆ.ಜಿ. ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರದಲ್ಲಿ ಲಾಭ ಇಲ್ಲ. ಗ್ರಾಹಕರು ಇಲ್ಲದಂತಾಗಿದೆ. ಕಾರಣ ಕೆಲವು ವ್ಯಾಪಾರಸ್ಥರು ಹಳ್ಳಿಗಳಲ್ಲಿನ ಮನೆಬಾಗಿಲಿಗೆ ತರಕಾರಿ-ಹಣ್ಣುಗಳನ್ನು ಸಣ್ಣ ವಾಹನಗಳಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹಾಗೂ ವ್ಯಾಪಾರ ಕಡಿಮೆಯಾಗಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಹಣಮಂತರಾಯ ನಾಯಕ.</p>.<p class="Subhead">ಹೂವಿನ ವ್ಯಾಪಾರ ಭರ್ಜರಿ: ‘ಕನಕಾಂಬರ, ಮಲ್ಲಿಗೆ, ಸೇವಂತಿಗೆ ₹20 ಮೊಳ, ಗುಲಾಬಿ ₹130 ಕೆ.ಜಿ, ಚೆಂಡು ಹೂವು ಕೆ.ಜಿಗೆ ₹50 ಯಂತೆ ಮಾರಾಟವಾದವು. ಈ ವರ್ಷ ಹೂವಿನ ವ್ಯಾಪಾರ ಚೆನ್ನಾಗಿದೆ. ಅಧಿಕ ಲಾಭವಾಗಿರುವುದು ಸಂತಸವಾಗಿದೆ’ ಎಂದು ಹೂವಿನ ವ್ಯಾಪಾರಿ ಶಿವುಕುಮಾರ ಮುನಗಾಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೈದಾಪುರ:</strong> ಪಟ್ಟಣದ ಜನ ಮಕರ ಸಂಕ್ರಾಂತಿ ಹಬ್ಬದ ಆಚರಣೆಗಾಗಿ ಮಂಗಳವಾರ ಎಳ್ಳುಬೆಲ್ಲ, ತರಕಾರಿ, ಪೂಜಾ ಸಾಮಗ್ರಿ, ಹೂವು-ಹಣ್ಣುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದರು.</p>.<p>ಬಸವೇಶ್ವರ ವೃತ್ತದಿಂದ ರೈಲು ನಿಲ್ದಾಣ ಸಮೀಪದವರೆಗೆ, ಕನಕ ವೃತ್ತದಿಂದ ಬಸ್ ನಿಲ್ದಾಣದವರೆಗೆ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ವ್ಯಾಪಾರಿಗಳು ಕುಳಿತುಕೊಂಡಿರುವುದು ಸಾಮಾನ್ಯವಾಗಿತ್ತು.</p>.<p>ಗ್ರಾಮೀಣ ಭಾಗದಿಂದ ರೈತರು ಸಂಕ್ರಾಂತಿ ಸಂದರ್ಭದಲ್ಲಿ ಬರುವ ಬಗೆಬಗೆಯ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿರುವುದು ಕಂಡುಬಂದಿತು. ಇದರಿಂದ ಕೆಲ ಕಾಲ ಪ್ರಮುಖ ಬೀದಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಯಿತು. ಬಟ್ಟೆ, ಕಿರಾಣಿ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.</p>.<p class="Subhead">ತರಕಾರಿ ಬೆಲೆಯಲ್ಲಿ ಇಳಿಕೆ: ಟೊಮೊಟೊ, ಗೋಬಿ, ಈರುಳ್ಳಿ ₹20 ಕೆ.ಜಿಯಂತೆ ಮಾರಾಟವಾದವು. ಬದನೆಕಾಯಿ ₹40 ಕೆ.ಜಿ, ಹಿರೇಕಾಯಿ, ಮೆಣಸಿನ ಕಾಯಿ, ಸೌತೆಕಾಯಿ, ಕ್ಯಾರೆಟ್, ಬಟಾಣಿ, ಹಾಗಲಕಾಯಿ, ಅವರೆಕಾಯಿ ₹60 ಕೆ.ಜಿ, ಚವಳೆಕಾಯಿ ₹ 80 ಕೆ.ಜಿ, ಕುಂಬಳಕಾಯಿ ಒಂದಕ್ಕೆ ₹30, ಮೆಂತೆ, ಪಾಲಕ, ಕೊತ್ತಂಬರಿ, ಪುಂಡಿಪಲ್ಲೆ, ಈರುಳ್ಳಿ ತಪ್ಪಲ ₹10ನಂತೆ ಕಟ್ಟು ಮಾರಾಟವಾದವು.</p>.<p>‘ಮಾರುಕಟ್ಟೆಗೆ ಬಳಿಚಕ್ರ, ಕಿಲ್ಲನಕೇರಾ, ಕೂಡ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ತರಕಾರಿಗಳನ್ನು ಮಾರಾಟ ಮಾಡಲು ತಂದಿದ್ದರು. ಆದರೆ, ದಿನನಿತ್ಯಕ್ಕಿಂತ ಬೆಲೆಯಲ್ಲಿ ಭಾರಿ ಇಳಿಕೆಯಿಂದ ವ್ಯಾಪಾರಸ್ಥರಿಗೆ ಹಬ್ಬ ಲಾಭ ತರಲಿಲ್ಲ’ ಎಂದು ತರಕಾರಿ ವ್ಯಾಪಾರಿ ಮಲ್ಲು ಕೂಡ್ಲೂರು ಬೇಸರ ವ್ಯಕ್ತಪಡಿಸಿದರು.</p>.<p class="Subhead">ಕುಂದಿದ ಹಣ್ಣಿನ ವ್ಯಾಪಾರ: ‘ಬಾಳೆಹಣ್ಣು ಡಜನ್ಗೆ ₹40ರಿಂದ ₹50, ಸಪೋಟಾ ₹60ರಿಂದ ₹80 ಕೆ.ಜಿ, ದ್ರಾಕ್ಷಿ ₹150 ಕೆ.ಜಿ, ದಾಳಿಂಬೆ ₹200 ಕೆ.ಜಿ, ಸೇಬು ನಾಲ್ಕಕ್ಕೆ ₹100, ಖರ್ಜೂರ ₹150 ಕೆ.ಜಿ, ಬಾರೆಹಣ್ಣು ₹80 ರಿಂದ ₹100 ಕೆ.ಜಿ. ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರದಲ್ಲಿ ಲಾಭ ಇಲ್ಲ. ಗ್ರಾಹಕರು ಇಲ್ಲದಂತಾಗಿದೆ. ಕಾರಣ ಕೆಲವು ವ್ಯಾಪಾರಸ್ಥರು ಹಳ್ಳಿಗಳಲ್ಲಿನ ಮನೆಬಾಗಿಲಿಗೆ ತರಕಾರಿ-ಹಣ್ಣುಗಳನ್ನು ಸಣ್ಣ ವಾಹನಗಳಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹಾಗೂ ವ್ಯಾಪಾರ ಕಡಿಮೆಯಾಗಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಹಣಮಂತರಾಯ ನಾಯಕ.</p>.<p class="Subhead">ಹೂವಿನ ವ್ಯಾಪಾರ ಭರ್ಜರಿ: ‘ಕನಕಾಂಬರ, ಮಲ್ಲಿಗೆ, ಸೇವಂತಿಗೆ ₹20 ಮೊಳ, ಗುಲಾಬಿ ₹130 ಕೆ.ಜಿ, ಚೆಂಡು ಹೂವು ಕೆ.ಜಿಗೆ ₹50 ಯಂತೆ ಮಾರಾಟವಾದವು. ಈ ವರ್ಷ ಹೂವಿನ ವ್ಯಾಪಾರ ಚೆನ್ನಾಗಿದೆ. ಅಧಿಕ ಲಾಭವಾಗಿರುವುದು ಸಂತಸವಾಗಿದೆ’ ಎಂದು ಹೂವಿನ ವ್ಯಾಪಾರಿ ಶಿವುಕುಮಾರ ಮುನಗಾಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>