<p><strong>ವಡಗೇರಾ:</strong> ತಾಲ್ಲೂಕಿನ ಬೆನಕಹಳ್ಳಿ ಗ್ರಾಮದ ಹತ್ತಿರ ಇರುವ ಭೀಮಾ ನದಿ ನೀರಿನಲ್ಲಿ ಬುಧವಾರ 7 ವರ್ಷದ ಬಾಲಕಿ ಮುಳಗಿ ಮೃತಪಟ್ಟಿದ್ದಾಳೆ.</p>.<p>ತಾಲ್ಲೂಕಿನ ಜೋಳದಡಗಿ ಗ್ರಾಮದ ನಿವಾಸಿ ಮೀನುಗಾರ ಕೊಂಡಪ್ಪ ಹಾಗೂ ತಾಯಮ್ಮ ದಂಪತಿಗಳ ಪುತ್ರಿ ಮರೆಮ್ಮ (7) ಘಟನೆಯಲ್ಲಿ ಮೃತಪಟ್ಟ ಬಾಲಕಿ ಎಂದು ತಿಳಿದು ಬಂದಿದೆ.</p>.<p><strong>ಘಟನೆಯ ವಿವರ:</strong> ಬೆನಕನಹಳ್ಳಿ ಗ್ರಾಮದ ಗ್ರಾಮದೇವತೆ ಮರೆಮ್ಮ ದೇವಿ ಜಾತ್ರೆ ಅಂಗವಾಗಿ ಜೋಳದಡಗಿ ಗ್ರಾಮದಿಂದ ಕುಟುಂಬ ಸಮೇತವಾಗಿ ಕೊಂಡಪ್ಪ ಜಾತ್ರೆಗೆ ಬಂದಿದ್ದರು. ಪಕ್ಕದಲ್ಲಿಯೆ ಇರುವ ಭೀಮಾ ನದಿಗೆ ಬಟ್ಟೆ ಒಗೆಯಲು ತಾಯಿ ತಾಯಮ್ಮಳ ಜತೆ ಮೃತ ಬಾಲಕಿಯೂ ನದಿಗೆ ಹೋಗಿದ್ದಳು.</p>.<p>ತಾಯಿ ತಾಯಮ್ಮ ಬಟ್ಟೆ ಒಗೆಯುವ ಮುಂಚೆ ಮಗಳ ಕೈಗೆ ಮೊಬೈಲ್ ಕೊಟ್ಟು ಬಟ್ಟೆ ಒಗೆಯುವುದರಲ್ಲಿ ಮಗ್ನಳಾಗಿದ್ದಳು. ಈ ವೇಳೆ ಬಾಲಕಿ ಕಾಲು ಜಾರಿ ನದಿಯ ನೀರಿಗೆ ಬಿದ್ದಿದ್ದಾಳೆ. ಸ್ವಲ್ಪ ಸಮಯದ ನಂತರ ಮಗಳನ್ನು ಗಮನಿಸಿದ ತಾಯಿ ತಾಯಮ್ಮ ಮಗಳು ಸುಳಿವು ಇಲ್ಲದ್ದನ್ನು ಕಂಡು ಜೋರಾಗಿ ಅಳುವುದು ಹಾಗೂ ಚೀರುವುದನ್ನು ಮಾಡಿದ್ದಾಳೆ</p>.<p>ಈಕೆಯ ಅಳುವನ್ನು ಕಂಡು ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ ಸ್ಥಳಿಯರ ಸಹಾಯದಿಂದ ಮಗಳನ್ನು ರಕ್ಷಣೆ ಮಾಡಿ ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ:</strong> ತಾಲ್ಲೂಕಿನ ಬೆನಕಹಳ್ಳಿ ಗ್ರಾಮದ ಹತ್ತಿರ ಇರುವ ಭೀಮಾ ನದಿ ನೀರಿನಲ್ಲಿ ಬುಧವಾರ 7 ವರ್ಷದ ಬಾಲಕಿ ಮುಳಗಿ ಮೃತಪಟ್ಟಿದ್ದಾಳೆ.</p>.<p>ತಾಲ್ಲೂಕಿನ ಜೋಳದಡಗಿ ಗ್ರಾಮದ ನಿವಾಸಿ ಮೀನುಗಾರ ಕೊಂಡಪ್ಪ ಹಾಗೂ ತಾಯಮ್ಮ ದಂಪತಿಗಳ ಪುತ್ರಿ ಮರೆಮ್ಮ (7) ಘಟನೆಯಲ್ಲಿ ಮೃತಪಟ್ಟ ಬಾಲಕಿ ಎಂದು ತಿಳಿದು ಬಂದಿದೆ.</p>.<p><strong>ಘಟನೆಯ ವಿವರ:</strong> ಬೆನಕನಹಳ್ಳಿ ಗ್ರಾಮದ ಗ್ರಾಮದೇವತೆ ಮರೆಮ್ಮ ದೇವಿ ಜಾತ್ರೆ ಅಂಗವಾಗಿ ಜೋಳದಡಗಿ ಗ್ರಾಮದಿಂದ ಕುಟುಂಬ ಸಮೇತವಾಗಿ ಕೊಂಡಪ್ಪ ಜಾತ್ರೆಗೆ ಬಂದಿದ್ದರು. ಪಕ್ಕದಲ್ಲಿಯೆ ಇರುವ ಭೀಮಾ ನದಿಗೆ ಬಟ್ಟೆ ಒಗೆಯಲು ತಾಯಿ ತಾಯಮ್ಮಳ ಜತೆ ಮೃತ ಬಾಲಕಿಯೂ ನದಿಗೆ ಹೋಗಿದ್ದಳು.</p>.<p>ತಾಯಿ ತಾಯಮ್ಮ ಬಟ್ಟೆ ಒಗೆಯುವ ಮುಂಚೆ ಮಗಳ ಕೈಗೆ ಮೊಬೈಲ್ ಕೊಟ್ಟು ಬಟ್ಟೆ ಒಗೆಯುವುದರಲ್ಲಿ ಮಗ್ನಳಾಗಿದ್ದಳು. ಈ ವೇಳೆ ಬಾಲಕಿ ಕಾಲು ಜಾರಿ ನದಿಯ ನೀರಿಗೆ ಬಿದ್ದಿದ್ದಾಳೆ. ಸ್ವಲ್ಪ ಸಮಯದ ನಂತರ ಮಗಳನ್ನು ಗಮನಿಸಿದ ತಾಯಿ ತಾಯಮ್ಮ ಮಗಳು ಸುಳಿವು ಇಲ್ಲದ್ದನ್ನು ಕಂಡು ಜೋರಾಗಿ ಅಳುವುದು ಹಾಗೂ ಚೀರುವುದನ್ನು ಮಾಡಿದ್ದಾಳೆ</p>.<p>ಈಕೆಯ ಅಳುವನ್ನು ಕಂಡು ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ ಸ್ಥಳಿಯರ ಸಹಾಯದಿಂದ ಮಗಳನ್ನು ರಕ್ಷಣೆ ಮಾಡಿ ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>