ಯಾದಗಿರಿ: ಆರ್ಥಿಕ ತೊಂದರೆಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರ ಕಾಶಿನಾಥ ರಾಥೋಡ್ (37) ಗುರುಮಠಕಲ್ ಪಟ್ಟಣದ ಸಪ್ತಗಿರಿ ಕಂಪ್ಯೂಟರ್ಸ್ ಹತ್ತಿರದ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾದಗಿರಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಥೋಡ್ ಅವರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದರೂ ಬಸ್ ಮಾರ್ಗ ತೋರಿಸದ ಕಾರಣ ಮನೆಗೆ ಬಂದು ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಕಳೆದ 15 ದಿನಗಳಿಂದ ಬಸ್ ಮಾರ್ಗ ತೋರಿಸದ ಕಾರಣ ನೊಂದಿದ್ದರು. ಇದರ ಜೊತೆಗೆ ಆರ್ಥಿಕ ತೊಂದರೆ ಇತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಕಲಬುರಗಿ ಜಿಲ್ಲೆಯವರು ಎಂದು ತಿಳಿದುಬಂದಿದೆ.