<p><strong>ಸುರಪುರ:</strong> ‘ಮಾಹಿತಿ ಮತ್ತು ತಂತ್ರಜ್ಞಾನ ಅಮೋಘವಾಗಿ ಬೆಳೆದಿದೆ. ಹೆಚ್ಚು ತಿಂದರೆ ವಿಷ ಎನ್ನಲಾಗುತ್ತದೆ. ಅದರಂತೆ ಮೋಬೈಲ್ನ ಹೆಚ್ಚು ಬಳಕೆಯಿಂದ ಹಾನಿ ಸಂಭವಿಸುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಈ ಗೀಳಿನಿಂದ ಹೊರಬರಲು ಒದ್ದಾಡುತ್ತಿದ್ದಾರೆ’ ಎಂದು ಕಲಬುರಗಿಯ ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶ್ವರಾನಂದ ಹೇಳಿದರು.</p>.<p>ನಗರದ ಪ್ರಭು ಮತ್ತು ಬೋಹರಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ತಂತ್ರಜ್ಞಾನ ನಮ್ಮ ಅಭಿವೃದ್ಧಿಗೆ ಪೂರಕವಾಗಿದೆ. ಅದರ ಸಮರ್ಪಕ ಬಳಕೆಯ ಬಗ್ಗೆ ತಿಳಿದುಕೊಳ್ಳಬೇಕು. ಅದುವೇ ನಮ್ಮ ಅವಸಾನಕ್ಕೆ ಕಾರಣವಾಗಬಾರದು’ ಎಂದು ತಿಳಿಸಿದರು.</p>.<p>‘ಇಂದಿನ ವಿದ್ಯಾರ್ಥಿಗಳು ಪಠ್ಯಕ್ರಮದ ಒತ್ತಡ, ಪರೀಕ್ಷಾ ತಯಾರಿ ಇತರ ಅಂಶಗಳಿಂದ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ನಮ್ಮ ಸುಕೃತದಿಂದ ನಾವು ಮನುಷ್ಯರಾಗಿ ಜನಿಸಿದ್ದೇವೆ. ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದರು.</p>.<p>‘ನಮ್ಮ ಸನಾತನ ಪರಂಪರೆಯ ಯೋಗ, ಧ್ಯಾನಗಳು ಉಪಯುಕ್ತವಾಗಿವೆ. ನಿತ್ಯವೂ ಇವುಗಳನ್ನು ಕೈಗೊಳ್ಳುವುದರಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ’ ಎಂದರು.</p>.<p>ಎಚ್ಕೆಇ ಸಂಸ್ಥೆಯ ಸದಸ್ಯರಾದ ನಿಶಾಂತ ಎಲಿ, ಪ್ರಶಾಂತ ಉಣಚಾಗಿ ಮಾತನಾಡಿದರು.</p>.<p>ಪದವಿ ಕಾಲೇಜಿನ ಪ್ರಾಚಾರ್ಯ ವಿರುಪಾಕ್ಷಿ ನಾಯಕ, ಉಪನ್ಯಾಸಕ ಸಿ.ವಿ. ಕಲಬುರಗಿ ವೇದಿಕೆಯಲ್ಲಿದ್ದರು.</p>.<p>ಪ್ರಾಚಾರ್ಯ ಕಿಶನ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಉಪೇಂದ್ರನಾಯಕ ಸುಬೇದಾರ ಸ್ವಾಗತಿಸಿದರು. ಸುರೇಶ ಮಾಮಡಿ ನಿರೂಪಿಸಿದರು. ಶರಣುನಾಯಕ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ಮಾಹಿತಿ ಮತ್ತು ತಂತ್ರಜ್ಞಾನ ಅಮೋಘವಾಗಿ ಬೆಳೆದಿದೆ. ಹೆಚ್ಚು ತಿಂದರೆ ವಿಷ ಎನ್ನಲಾಗುತ್ತದೆ. ಅದರಂತೆ ಮೋಬೈಲ್ನ ಹೆಚ್ಚು ಬಳಕೆಯಿಂದ ಹಾನಿ ಸಂಭವಿಸುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಈ ಗೀಳಿನಿಂದ ಹೊರಬರಲು ಒದ್ದಾಡುತ್ತಿದ್ದಾರೆ’ ಎಂದು ಕಲಬುರಗಿಯ ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶ್ವರಾನಂದ ಹೇಳಿದರು.</p>.<p>ನಗರದ ಪ್ರಭು ಮತ್ತು ಬೋಹರಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ತಂತ್ರಜ್ಞಾನ ನಮ್ಮ ಅಭಿವೃದ್ಧಿಗೆ ಪೂರಕವಾಗಿದೆ. ಅದರ ಸಮರ್ಪಕ ಬಳಕೆಯ ಬಗ್ಗೆ ತಿಳಿದುಕೊಳ್ಳಬೇಕು. ಅದುವೇ ನಮ್ಮ ಅವಸಾನಕ್ಕೆ ಕಾರಣವಾಗಬಾರದು’ ಎಂದು ತಿಳಿಸಿದರು.</p>.<p>‘ಇಂದಿನ ವಿದ್ಯಾರ್ಥಿಗಳು ಪಠ್ಯಕ್ರಮದ ಒತ್ತಡ, ಪರೀಕ್ಷಾ ತಯಾರಿ ಇತರ ಅಂಶಗಳಿಂದ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ನಮ್ಮ ಸುಕೃತದಿಂದ ನಾವು ಮನುಷ್ಯರಾಗಿ ಜನಿಸಿದ್ದೇವೆ. ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದರು.</p>.<p>‘ನಮ್ಮ ಸನಾತನ ಪರಂಪರೆಯ ಯೋಗ, ಧ್ಯಾನಗಳು ಉಪಯುಕ್ತವಾಗಿವೆ. ನಿತ್ಯವೂ ಇವುಗಳನ್ನು ಕೈಗೊಳ್ಳುವುದರಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ’ ಎಂದರು.</p>.<p>ಎಚ್ಕೆಇ ಸಂಸ್ಥೆಯ ಸದಸ್ಯರಾದ ನಿಶಾಂತ ಎಲಿ, ಪ್ರಶಾಂತ ಉಣಚಾಗಿ ಮಾತನಾಡಿದರು.</p>.<p>ಪದವಿ ಕಾಲೇಜಿನ ಪ್ರಾಚಾರ್ಯ ವಿರುಪಾಕ್ಷಿ ನಾಯಕ, ಉಪನ್ಯಾಸಕ ಸಿ.ವಿ. ಕಲಬುರಗಿ ವೇದಿಕೆಯಲ್ಲಿದ್ದರು.</p>.<p>ಪ್ರಾಚಾರ್ಯ ಕಿಶನ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಉಪೇಂದ್ರನಾಯಕ ಸುಬೇದಾರ ಸ್ವಾಗತಿಸಿದರು. ಸುರೇಶ ಮಾಮಡಿ ನಿರೂಪಿಸಿದರು. ಶರಣುನಾಯಕ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>