<p><strong>ಸುರಪುರ</strong>: ನಗರದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 192 ದಿನಗಳಿಂದ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ಹೋರಾಟ ಸಮಿತಿ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟದವರಿಗೆ ಶುಕ್ರವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಭೂಮಿ ಮಂಜೂರಾತಿ ಆದೇಶ ಪ್ರತಿ ನೀಡಿದರು.</p>.<p>ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭೂಮಿ ಮಂಜೂರಾತಿಗೆ ಒತ್ತಾಯಿಸಿ ಕೆಲ ತಿಂಗಳಿಂದ ಪ್ರತಿಭಟನೆ ನಡೆದಿತ್ತು. ಈ ಕುರಿತು ತಾಲ್ಲೂಕಾಡಳಿತದೊಂದಿಗೆ ಸುದೀರ್ಘವಾಗಿ ಚರ್ಚಿಸಿ, ಸರ್ಕಾರಿ ಭೂಮಿಯನ್ನು ಅಳೆತೆ ಮಾಡಿ ಗ್ರಂಥಾಲಯ ಮತ್ತು ಅಂಬೇಡ್ಕರ್ ಉದ್ಯಾನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಗೆ 10 ಗುಂಟೆ 8 ಆಣೆ ಜಮೀನು ಮಂಜೂರು ಮಾಡಲಾಗಿದೆ’ ಎಂದು ತಿಳಿಸಿದರು.</p>.<p>ಧರಣಿಯನ್ನು ಹಿಂಪಡೆಯಬೇಕು ಜತೆಗೆ ಮೈದಾನದಲ್ಲಿ ಹಾಕಿದ ಧ್ವಜಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದಾಗ ಹೋರಾಟಗಾರರು ಸಮ್ಮತಿ ಸೂಚಿಸಿದರು.</p>.<p>ಸಾಮೂಹಿಕ ಸಂಘಟನೆಗಳು ಭೂಮಿ ಮಂಜೂರಿ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ಗಾಂಧಿವೃತ್ತದಲ್ಲಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೂ ಆಗಮಿಸಿದ ಜಿಲ್ಲಾಧಿಕಾರಿ ಪ್ರತಿಭಟನೆ ಕೈಬಿಡುವಂತೆ ತಿಳಿಸಿದರು. ಸ್ವಲ್ಪ ಹೊತ್ತು ವಾಗ್ವಾದ ನಡೆಸಿದ ಮುಖಂಡರು ನಂತರ ಧರಣಿ ವಾಪಾಸಾತಿಗೆ ಸಮ್ಮತಿಸಿದರು.</p>.<p>ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಶೀಲ್ದಾರ್ ಎಚ್.ಎ. ಸರಕಾವಸ್, ಡಿವೈಎಸ್ಪಿ ಜಾವೇದ್ ಇನಾಮದಾರ್, ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ್, ಪಿಐ ಉಮೇಶ ನಾಯಕ ಉಪಸ್ಥಿತರಿದ್ದರು.</p>.<p>ಘಟನೆ ಹಿನ್ನೆಲೆ: 7 ತಿಂಗಳ ಹಿಂದೆ ದಲಿತ ಸಂಘಟನೆಗಳು ಅಂಬೇಡ್ಕರ್ ವೃತ್ತದ ಹಿಂದಿ ಜಾಗದಲ್ಲಿ ನೀಲಿ ಧ್ವಜ ಹಾಕಿದ್ದರು. ಅಲ್ಲಿ ಅಂಬೇಡ್ಕರ್ ಗ್ರಂಥಾಲಯ ಮತ್ತು ಉದ್ಯಾನಕ್ಕೆ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿದ್ದರು.</p>.<p>ಪ್ರಭು ಕಾಲೇಜಿನವರು ತಮ್ಮ ಸ್ಥಳದಲ್ಲಿ ಧ್ವಜ ಹಾಕಲಾಗಿದೆ ಎಂದು ತೆರವು ಗೊಳಿಸಿದಾಗ ವಿವಾದ ಆರಂಭವಾಯಿತು. ಮತ್ತೆ ನೀಲಿ ಧ್ವಜ ಹಾಕಿ ಭೂಮಿ ಮಂಜೂರಿಗೆ 192 ದಿನಗಳಿಂದ ನಿರಂತರ ಧರಣಿ ನಡೆಸಿದರು. </p>.<p>ವಾಲ್ಮೀಕಿ ಸಂಘಟನೆಯವರು ನೀಲಿ ಧ್ವಜದ ಅನತಿ ದೂರದಲ್ಲಿ ಕೇಸರಿ ಧ್ವಜ ಹಾಕಿ ನಮಗೂ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಹೆಸರಿನಲ್ಲಿ ಉದ್ಯಾನ ನಿರ್ಮಿಸಲು ಸ್ಥಳ ಮಂಜೂರು ಮಾಡುವಂತೆ ಹೋರಾಟ ನಡೆಸಿದ್ದರು.</p>.<p>ಪ್ರಭು ಕಾಲೇಜಿನ ಮೈದಾನದ ಪಕ್ಕ ಸರ್ಕಾರಿ ಜಾಗವಿದೆಯೆಂದು ತಾಲ್ಲೂಕು ಆಡಳಿತ ಸರ್ವೆ ಮಾಡಿ ಗುರುತಿಸಲಾಯಿತು. ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಎರಡು ಬಣಗಳಿಗೆ ತಲಾ 10 ಗುಂಟೆ 8 ಆಣೆ ಭೂಮಿ ಮಂಜೂರು ಆದೇಶ ನೀಡಿದರು.</p>.<p>ಆದರೆ ಸಾಮೂಹಿಕ ಸಂಘಟನೆಗಳು ಎರಡು ಬಣಗಳಿಗೆ ನೀಡಿದ ಭೂಮಿ ಮಂಜೂರು ಆದೇಶ ರದ್ದು ಪಡಿಸಬೇಕು. ಧ್ವಜ ತೆರವುಗೊಳಿಸಬೇಕು. ದಲಿತ ಸಂಘಟನೆಯವರು ಧರಣಿಗಾಗಿ ಹಾಕಿದ ಟೆಂಟ್ ತೆರವುಗೊಳಿಸಬೇಕೆಂದು ಮೂರು ದಿನಗಳಿಂದ ಗಾಂಧಿ ವೃತ್ತದಲ್ಲಿ ನಿರಂತರ ಧರಣಿ ನಡೆಸಿದ್ದರು.</p>.<div><blockquote>ಜಿಲ್ಲಾಧಿಕಾರಿ ಆದೇಶ ನಮಗೆ ತೃಪ್ತಿ ತಂದಿದೆ. ಕೊನೆಗೂ ನಮ್ಮ ಹೋರಾಟಕ್ಕೆ ಜಯ ಸಂದಿದೆ. ಇದು ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಸಂದ ಗೌರವ. ಧರಣಿ ಸಮಾಪ್ತಿಗೊಳಿಸಿದ್ದೇವೆ </blockquote><span class="attribution">ಮಾನಪ್ಪ ಕಟ್ಟಿಮನಿ ಅಂಬೇಡ್ಕರ್ ಗ್ರಂಥಾಲಯ ಭೂಮಿ ಮಂಜೂರು ಹೋರಾಟ ಸಮಿತಿ ಅಧ್ಯಕ್ಷ</span></div>.<div><blockquote>ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿ ಧರಣಿ ಹಿಂತೆಗೆದುಕೊಂಡಿದ್ದೇವೆ. ಆದೇಶ ರದ್ದು ಪಡಿಸಲು ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ </blockquote><span class="attribution">ವೆಂಕಟೇಶನಾಯಕ ಬೈರಿಮರಡಿ ಸಾಮೂಹಿಕ ಸಂಘಟನೆಗಳ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ನಗರದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 192 ದಿನಗಳಿಂದ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ಹೋರಾಟ ಸಮಿತಿ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟದವರಿಗೆ ಶುಕ್ರವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಭೂಮಿ ಮಂಜೂರಾತಿ ಆದೇಶ ಪ್ರತಿ ನೀಡಿದರು.</p>.<p>ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭೂಮಿ ಮಂಜೂರಾತಿಗೆ ಒತ್ತಾಯಿಸಿ ಕೆಲ ತಿಂಗಳಿಂದ ಪ್ರತಿಭಟನೆ ನಡೆದಿತ್ತು. ಈ ಕುರಿತು ತಾಲ್ಲೂಕಾಡಳಿತದೊಂದಿಗೆ ಸುದೀರ್ಘವಾಗಿ ಚರ್ಚಿಸಿ, ಸರ್ಕಾರಿ ಭೂಮಿಯನ್ನು ಅಳೆತೆ ಮಾಡಿ ಗ್ರಂಥಾಲಯ ಮತ್ತು ಅಂಬೇಡ್ಕರ್ ಉದ್ಯಾನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಗೆ 10 ಗುಂಟೆ 8 ಆಣೆ ಜಮೀನು ಮಂಜೂರು ಮಾಡಲಾಗಿದೆ’ ಎಂದು ತಿಳಿಸಿದರು.</p>.<p>ಧರಣಿಯನ್ನು ಹಿಂಪಡೆಯಬೇಕು ಜತೆಗೆ ಮೈದಾನದಲ್ಲಿ ಹಾಕಿದ ಧ್ವಜಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದಾಗ ಹೋರಾಟಗಾರರು ಸಮ್ಮತಿ ಸೂಚಿಸಿದರು.</p>.<p>ಸಾಮೂಹಿಕ ಸಂಘಟನೆಗಳು ಭೂಮಿ ಮಂಜೂರಿ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ಗಾಂಧಿವೃತ್ತದಲ್ಲಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೂ ಆಗಮಿಸಿದ ಜಿಲ್ಲಾಧಿಕಾರಿ ಪ್ರತಿಭಟನೆ ಕೈಬಿಡುವಂತೆ ತಿಳಿಸಿದರು. ಸ್ವಲ್ಪ ಹೊತ್ತು ವಾಗ್ವಾದ ನಡೆಸಿದ ಮುಖಂಡರು ನಂತರ ಧರಣಿ ವಾಪಾಸಾತಿಗೆ ಸಮ್ಮತಿಸಿದರು.</p>.<p>ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಶೀಲ್ದಾರ್ ಎಚ್.ಎ. ಸರಕಾವಸ್, ಡಿವೈಎಸ್ಪಿ ಜಾವೇದ್ ಇನಾಮದಾರ್, ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ್, ಪಿಐ ಉಮೇಶ ನಾಯಕ ಉಪಸ್ಥಿತರಿದ್ದರು.</p>.<p>ಘಟನೆ ಹಿನ್ನೆಲೆ: 7 ತಿಂಗಳ ಹಿಂದೆ ದಲಿತ ಸಂಘಟನೆಗಳು ಅಂಬೇಡ್ಕರ್ ವೃತ್ತದ ಹಿಂದಿ ಜಾಗದಲ್ಲಿ ನೀಲಿ ಧ್ವಜ ಹಾಕಿದ್ದರು. ಅಲ್ಲಿ ಅಂಬೇಡ್ಕರ್ ಗ್ರಂಥಾಲಯ ಮತ್ತು ಉದ್ಯಾನಕ್ಕೆ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿದ್ದರು.</p>.<p>ಪ್ರಭು ಕಾಲೇಜಿನವರು ತಮ್ಮ ಸ್ಥಳದಲ್ಲಿ ಧ್ವಜ ಹಾಕಲಾಗಿದೆ ಎಂದು ತೆರವು ಗೊಳಿಸಿದಾಗ ವಿವಾದ ಆರಂಭವಾಯಿತು. ಮತ್ತೆ ನೀಲಿ ಧ್ವಜ ಹಾಕಿ ಭೂಮಿ ಮಂಜೂರಿಗೆ 192 ದಿನಗಳಿಂದ ನಿರಂತರ ಧರಣಿ ನಡೆಸಿದರು. </p>.<p>ವಾಲ್ಮೀಕಿ ಸಂಘಟನೆಯವರು ನೀಲಿ ಧ್ವಜದ ಅನತಿ ದೂರದಲ್ಲಿ ಕೇಸರಿ ಧ್ವಜ ಹಾಕಿ ನಮಗೂ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಹೆಸರಿನಲ್ಲಿ ಉದ್ಯಾನ ನಿರ್ಮಿಸಲು ಸ್ಥಳ ಮಂಜೂರು ಮಾಡುವಂತೆ ಹೋರಾಟ ನಡೆಸಿದ್ದರು.</p>.<p>ಪ್ರಭು ಕಾಲೇಜಿನ ಮೈದಾನದ ಪಕ್ಕ ಸರ್ಕಾರಿ ಜಾಗವಿದೆಯೆಂದು ತಾಲ್ಲೂಕು ಆಡಳಿತ ಸರ್ವೆ ಮಾಡಿ ಗುರುತಿಸಲಾಯಿತು. ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಎರಡು ಬಣಗಳಿಗೆ ತಲಾ 10 ಗುಂಟೆ 8 ಆಣೆ ಭೂಮಿ ಮಂಜೂರು ಆದೇಶ ನೀಡಿದರು.</p>.<p>ಆದರೆ ಸಾಮೂಹಿಕ ಸಂಘಟನೆಗಳು ಎರಡು ಬಣಗಳಿಗೆ ನೀಡಿದ ಭೂಮಿ ಮಂಜೂರು ಆದೇಶ ರದ್ದು ಪಡಿಸಬೇಕು. ಧ್ವಜ ತೆರವುಗೊಳಿಸಬೇಕು. ದಲಿತ ಸಂಘಟನೆಯವರು ಧರಣಿಗಾಗಿ ಹಾಕಿದ ಟೆಂಟ್ ತೆರವುಗೊಳಿಸಬೇಕೆಂದು ಮೂರು ದಿನಗಳಿಂದ ಗಾಂಧಿ ವೃತ್ತದಲ್ಲಿ ನಿರಂತರ ಧರಣಿ ನಡೆಸಿದ್ದರು.</p>.<div><blockquote>ಜಿಲ್ಲಾಧಿಕಾರಿ ಆದೇಶ ನಮಗೆ ತೃಪ್ತಿ ತಂದಿದೆ. ಕೊನೆಗೂ ನಮ್ಮ ಹೋರಾಟಕ್ಕೆ ಜಯ ಸಂದಿದೆ. ಇದು ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಸಂದ ಗೌರವ. ಧರಣಿ ಸಮಾಪ್ತಿಗೊಳಿಸಿದ್ದೇವೆ </blockquote><span class="attribution">ಮಾನಪ್ಪ ಕಟ್ಟಿಮನಿ ಅಂಬೇಡ್ಕರ್ ಗ್ರಂಥಾಲಯ ಭೂಮಿ ಮಂಜೂರು ಹೋರಾಟ ಸಮಿತಿ ಅಧ್ಯಕ್ಷ</span></div>.<div><blockquote>ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿ ಧರಣಿ ಹಿಂತೆಗೆದುಕೊಂಡಿದ್ದೇವೆ. ಆದೇಶ ರದ್ದು ಪಡಿಸಲು ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ </blockquote><span class="attribution">ವೆಂಕಟೇಶನಾಯಕ ಬೈರಿಮರಡಿ ಸಾಮೂಹಿಕ ಸಂಘಟನೆಗಳ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>