ಶಹಾಪುರ: ನಗರದ ಟಿಎಪಿಸಿಎಂಎಸ್ನ ಆಹಾರ ಧಾನ್ಯ ಉಗ್ರಾಣದಲ್ಲಿ ಸುಮಾರು ₹ 2.6 ಕೋಟಿ ಮೌಲ್ಯದ 6,077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಡಿ.14ರಂದು ಆಹಾರ ನಿರೀಕ್ಷಕ ಜಂಬಯ್ಯ ಗಣಚಾರಿ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ವಿಚಿತ್ರವೆಂದರೆ ನಾಲ್ಕು ತಿಂಗಳ ಬಳಿಕ ಮತ್ತೆ ಅಮಾನತುಗೊಂಡಿದ್ದ ಜಂಬಯ್ಯ ಗಣಚಾರಿ ಅವರು, ಅದೇ ಸ್ಥಾನಕ್ಕೆ ಮರಳಿದ್ದಾರೆ ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ಆರೋಪಿಸಿದ್ದಾರೆ.