ರುಕ್ಮಾಬಾಯಿ ಅರ್ಜುನ ಪವಾರ ಎಂಬ ಮಹಿಳೆಗೆ ಈಗಾಗಲೇ ನಾಲ್ವರು ಹೆಣ್ಣುಮಕ್ಕಳಿದ್ದು, ಐದನೇಯದೂ ಹೆಣ್ಣುಶಿಶುವಾಗಿತ್ತು. ತನ್ನ ಮಗಳಿಗೆ ಈ ಎಲ್ಲ ಮಕ್ಕಳನ್ನು ಸಾಕಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರುಕ್ಮಾಬಾಯಿ ಅವರ ತಾಯಿ ಗಂಗಾಬಾಯಿ ತೊಗರಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕವನ್ನು ಮಗುವಿಗೆ ಕುಡಿಸಿ ಸಾಯಿಸಿದ್ದಾರೆ.