ಭಾಗ -47
629.ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಹಗುರವಾದ ಲೋಹ?
ಎ)ಪಾದರಸ ಬಿ)ಸೀಸ
ಸಿ)ಬೆಳ್ಳಿ ಡಿ)ಲೀಥಿಯಂ
630. ಹೈದರಾಬಾದ್ನಲ್ಲಿ ಇರುವ ರಾಷ್ಟ್ರೀಯಪೊಲೀಸ್ಅಕಾಡೆಮಿಯ ಹೆಸರೇನು?
ಎ) ಸರ್ದಾರ್ ವಲ್ಲಭಬಾಯ್ ರಾಷ್ಟ್ರೀಯಪೊಲೀಸ್ಅಕಾಡೆಮಿ
ಬಿ) ಸುಭಾಸ್ಚಂದ್ರ ಬೋಸ್ ರಾಷ್ಟ್ರೀಯಪೊಲೀಸ್ಅಕಾಡೆಮಿ
ಸಿ) ಭಗತ್ಸಿಂಗ್ ರಾಷ್ಟ್ರೀಯಪೊಲೀಸ್ಅಕಾಡೆಮಿ
ಡಿ) ಇಂದಿರಾಗಾಂಧಿ ರಾಷ್ಟ್ರೀಯಪೊಲೀಸ್ಅಕಾಡೆಮಿ
631.ಯಾವ ರಕ್ತದ ಗುಂಪು‘ಯುನಿವರ್ಸಲ್ ರಿಸೀವರ್’ ಆಗಿದೆ?
ಎ) ಒ ನೆಗೆಟಿವ್ ಬಿ) ಬಿ ನೆಗೆಟಿವ್
ಸಿ) ಎಬಿ ಪಾಸಿಟಿವ್ ಡಿ) ಎಬಿ ನೆಗೆಟಿವ್
632.ರಾಸುಗಳಲ್ಲಿ ಕಾಲುಬಾಯಿ ರೋಗ ಯಾವುದರಿಂದ ಬರುತ್ತದೆ?
ಎ)ಬ್ಯಾಕ್ಟೀರಿಯಾ
ಬಿ)ವೈರಾಣು
ಸಿ)ಫಂಗಸ್
ಡಿ)ಫ್ರೊಟೊಝೋವಾ
633.ಭಾರತದ ಸಂವಿಧಾನದ ಯಾವ ವಿಧಿಯು ಸಾಂವಿಧಾನಿಕ ಪರಿಹಾರದ ಹಕ್ಕಿಗೆಸಂಬಂಧಿಸಿದೆ?
ಎ) 23 ಬಿ) 24 ಸಿ) 30 ಡಿ) 32
634.ಸೂಪರ್ ನೋವಾ ಇದುಏನು?
ಎ) ಅಳಿವಿನಂಚಿನಲ್ಲಿರುವ ಕ್ಷುದ್ರಗ್ರಹ
ಬಿ) ಅಳಿವಿನಂಚಿನಲ್ಲಿರುವ ನಕ್ಷತ್ರ
ಸಿ) ಅಳಿವಿನಂಚಿನಲ್ಲಿರುವಕಪ್ಪುರಂಧ್ರ
ಡಿ) ಅಳಿವಿನಂಚಿನಲ್ಲಿರುವ ಧೂಮಕೇತು
635.ಯಾವುದನ್ನು‘ಬಂಗಾರದ ನಾರು’ಎಂದು ಕರೆಯುತ್ತಾರೆ?
ಎ)ರೇಷ್ಮೆ
ಬಿ)ಹತ್ತಿ
ಸಿ)ಸೆಣಬು
ಡಿ)ನೈಲಾನ್
636.ನೀಲಗಿರಿ ಯಾವುದರ ಭಾಗವಾಗಿದೆ?
ಎ)ಪಶ್ಚಿಮ ಘಟ್ಟಗಳು
ಬಿ) ಪೂರ್ವಘಟ್ಟಗಳು
ಸಿ)ಕರಾವಳಿಪ್ರದೇಶ
ಡಿ) ಸೂಚಿಪರ್ಣ ಕಾಡುಗಳು
637.ಯಾವ ರಾಜ್ಯದಲ್ಲಿ ಖಜುರಾಹೋ ಮಂದಿರವಿದೆ?
ಎ)ಉತ್ತರಪ್ರದೇಶ
ಬಿ)ಮಧ್ಯಪ್ರದೇಶ
ಸಿ)ಬಿಹಾರ
ಡಿ)ಮಹಾರಾಷ್ಟ್ರ
638.ಕೆಳಗಿನವುಗಳಲ್ಲಿಯಾವ ಬುಡಕಟ್ಟು ಪಂಗಡವು ಮಧ್ಯ ಭಾರತದಲ್ಲಿಕಂಡುಬರುವುದಿಲ್ಲ?
ಎ)ಗೊಂಡರು ಬಿ)ತೋಡರು
ಸಿ)ಭಿಲ್ಲರು ಡಿ)ಮುಂಡರು
639. ‘ಪರಮೇಶ್ವರ’ ಎಂಬ ಬಿರುದಾಂಕಿತನಾಗಿದ್ದ ದೊರೆ ಯಾರು?
ಎ) ಹರ್ಷವರ್ಧನ
ಬಿ)ಪುಲಿಕೇಶಿII
ಸಿ)ವಿಕ್ರಮಾದಿತ್ಯ
ಡಿ)ವಿನಯಾದಿತ್ಯ
640. ಅಂಜನಾದ್ರಿ ಬೆಟ್ಟ ಯಾವ ಜಿಲ್ಲೆಯಲ್ಲಿದೆ?
ಎ)ಬಳ್ಳಾರಿ
ಬಿ)ರಾಯಚೂರು
ಸಿ)ಕೊಪ್ಪಳ
ಡಿ)ಯಾದಗಿರಿ
641.ಯಾವವರ್ಷಹೈದರಾಬಾದ್ ಭಾರತಒಕ್ಕೂಟದಲ್ಲಿ ವಿಲೀನವಾಯಿತು?
ಎ) 1947 ಬಿ) 1948
ಸಿ) 1949 ಡಿ) 1951
642. ಕರ್ನಾಟಕ ಏಕೀಕರಣವಾದಾಗ ರಾಜ್ಯದ ಮುಖ್ಯಮಂತ್ರಿ ಯಾರಾಗಿದ್ದರು?
ಎ)ಬಿ.ಡಿ.ಜತ್ತಿ
ಬಿ)ಎಸ್.ಆರ್.ಕಂಠಿ
ಸಿ)ವೀರೇಂದ್ರ ಪಾಟೀಲ
ಡಿ)ಎಸ್.ನಿಜಲಿಂಗಪ್ಪ
643. ಕರ್ನಾಟಕವಿಧಾನಪರಿಷತ್ಸದಸ್ಯರ ಸಂಖ್ಯೆಎಷ್ಟು?
ಎ) 224 ಬಿ) 225
ಸಿ) 75 ಡಿ) 100
644.ವಿಸ್ತೀರ್ಣದಲ್ಲಿ ಕರ್ನಾಟಕ ದೇಶದಲ್ಲಿ ಎಷ್ಟನೇ ಸ್ಥಾನ ಪಡೆದಿದೆ?
ಎ) 6 ಬಿ) 7
ಸಿ) 8 ಡಿ) 9
645.ಆಡಳಿತದಲ್ಲಿ ಕನ್ನಡವನ್ನು ಮೊದಲಿಗೆ ಉಪಯೋಗಿಸಿದ ದೊರೆಗಳು ಯಾರು?
ಎ)ಕದಂಬರು ಬಿ)ಶಾತವಾಹನರು
ಸಿ)ಗಂಗರು ಡಿ)ಚಾಲುಕ್ಯರು
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.