ಲೋಕ ಕಲ್ಯಾಣಕ್ಕಾಗಿ, ನಗರದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ವಿನೋಬನಗರ ಶನೀಶ್ವರ ದೇವಾಲಯ ಸಮಿತಿ ಟ್ರಸ್ಟ್ ಫೆ. 6ರಿಂದ ಶತಚಂಡಿಕಾ ಮಹಾಯಾಗ ಹಮ್ಮಿಕೊಳ್ಳಲಾಗಿತ್ತು. 6 ರಿಂದ 9ರವರೆಗೆ ಗುರು ಪ್ರಾರ್ಥನೆ, ಗುರುಪೂಜೆ, ಪುಣ್ಯಾಹ, ನಾಂದಿ, ಸಂಜೆ ನವಾಕ್ಷರೀ ಮಂತ್ರ ಜಪ, ಪೂಜೆ, ಅಷ್ಟವದನಾ ಸೇವೆ, ನವಾವರಣ ಪೂಜೆ, ಸಪ್ತಶತಿಪಾರಾಯಣ, ನವಾಕ್ಷರೀ ಮಂತ್ರ ಜಪ, ಪೂಜೆ ನೆರವೇರಿತ್ತು.ಮೆರವಣಿಗೆಯಲ್ಲಿ ಚಂಡೆ, ತಾಳಮದ್ದಳೆ, ವಾದ್ಯಗಳೊಂದಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಆಯನೂರು ಮಂಜುನಾಥ್, ದತ್ತಾತ್ರಿ, ಚನ್ನಬಸಪ್ಪ, ಮದುಸೂಧನ್, ಸಹನಾ ಚೇತನ್ ಪಾಲ್ಗೊಂಡಿದ್ದರು