ಬೆಂಗಳೂರು: ಯಶವಂತಪುರದ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬಳಿಯ ಕೆಳಸೇತುವೆಯಲ್ಲಿ ನಾಗರ ಹಾವೊಂದು ಮಲಗಿದ್ದರಿಂದ ವಾಹನಗಳ ದಟ್ಟಣೆ ಉಂಟಾಯಿತು.
ಕೆಳಸೇತುವೆಯಲ್ಲಿ ರಸ್ತೆ ದಾಟುತ್ತಿದ್ದ ಹಾವಿನ ಮೇಲೆ ವಾಹನವೊಂದು ಹಾದು ಹೋಗಿತ್ತು. ಅದರಿಂದ ಹಾವಿನ ಹಿಂಭಾಗದ ಬಾಲಕ್ಕೆ ಗಾಯವಾಗಿ, ರಕ್ತ ಬರಲಾರಂಭಿಸಿತ್ತು. ಮುಂದೆ ಹೋಗಲು ಸಾಧ್ಯವಾಗದೆ ರಸ್ತೆ ಮಧ್ಯೆದಲ್ಲೇ ಹಾವು ಮಲಗಿಕೊಂಡಿತು.
ಅದೇ ಮಾರ್ಗವಾಗಿ ಹೊರಟಿದ್ದ ಚಾಲಕರು, ಹಾವು ಗಮನಿಸಿ ವಾಹನಗಳನ್ನು ನಿಲ್ಲಿಸಿದರು. ಎಷ್ಟೇ ಪ್ರಯತ್ನಿಸಿದರೂ ಹಾವು ಜಾಗ ಬಿಟ್ಟು ಹೋಗಲಿಲ್ಲ. ಇದರಿಂದ ಕೆಳೆಸೇತುವೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಯಶವಂತಪುರ ಬಸ್ ನಿಲ್ದಾಣ, ಪಶ್ಚಿಮ ಕಾರ್ಡ್ ರಸ್ತೆ ಹಾಗೂ ಸುತ್ತಮುತ್ತ ದಟ್ಟಣೆ ಉಂಟಾಯಿತು.
ಅರ್ಧ ಗಂಟೆ ಬಳಿಕ ಹಾವು ರಸ್ತೆಯಿಂದ ಪಕ್ಕದ ಪೊದೆಯೊಳಗೆ ಹೋಯಿತು. ಬಳಿಕವೇ ವಾಹನಗಳ ಸಂಚಾರ ಯಥಾಪ್ರಕಾರ ಆರಂಭವಾಯಿತು.