‘ಚುನಾವಣೆ ಸಮಯದಲ್ಲಿ ಬೇಸರ, ಅಸಮಾಧಾನ ಶಮನಗೊಳಿಸಲು ಎಲ್ಲ ಪಕ್ಷಗಳಲ್ಲಿಯೂ ಮುಖಂಡರಿಗೆ ಭರವಸೆ ಕೊಡುತ್ತಾರೆ. ಸರಿಪಡಿಸುತ್ತೇವೆ ಎನ್ನುತ್ತಾರೆ. ಆದರೆ ಚುನಾವಣೆ ಮುಗಿದ ನಂತರ ಕೊಟ್ಟ ಮಾತಿಗೆ ಎಷ್ಟರ ಮಟ್ಟಿಗೆ ಬದ್ಧತೆ ಉಳಿಸಿಕೊಳ್ಳುತ್ತಾರೆ. ಈಗ ನಡೆದಿರುವುದು ಇದೇ ಚರ್ಚೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ ನಂತರ ನಮ್ಮ ನಾಯಕ ಶಿವಶಂಕರ ರೆಡ್ಡಿ ಸೂಕ್ತ ತೀರ್ಮಾನಕೈಗೊಳ್ಳುವರು. ಅವರ ನಿರ್ಧಾರಕ್ಕೆ ನಾವು ಬದ್ಧ’ ಎಂದು ಬೆಂಬಲಿಗರು ತಿಳಿಸಿದರು.