ದೆಹಲಿಯಿಂದ ಮರಳಿದ ವಿಜಯೇಂದ್ರ ಅವರು ಮಾಧುಸ್ವಾಮಿ ಜತೆ ಮಾತನಾಡಲು ದೂರವಾಣಿ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಬದಲಿಗೆ ಅವರ ಆಪ್ತ ಸಹಾಯಕ ಮಾತನಾಡಿ, ‘ಸಾಹೇಬರು ಮಾತನಾಡುವುದಿಲ್ಲವಂತೆ‘ ಎಂದು ಹೇಳಿದರು. ಈ ಸಂದರ್ಭದಲ್ಲಿ ‘ಮಾತನಾಡೋದು ಏನಿದೆ’ ಎಂದು ಮಾಧುಸ್ವಾಮಿ ಸಿಟ್ಟಿನಿಂದ ಹೇಳಿದ್ದು ವಿಜಯೇಂದ್ರ ಅವರಿಗೆ ಕೇಳಿಸಿತು. ಮತ್ತೊಮ್ಮೆ ಕರೆ ಮಾಡಿದರು. ಆಗಲೂ ಮಾಧುಸ್ವಾಮಿ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.