ಕೃಷ್ಣಾ ಪಟೇಲ್ ಅವರು ಅಪ್ನಾ ದಳ ಪಕ್ಷದ ಮತ್ತೊಂದು ಬಣದ ಅಧ್ಯಕ್ಷೆಯಾಗಿರುವ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರ ತಾಯಿಯಾಗಿದ್ದಾರೆ.
ಎಸ್ಪಿ ರಾಜ್ಯದ 17 ಸ್ಥಾನಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದ್ದು, ಉಳಿದ 63 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲು ತೀರ್ಮಾನಿಸಿತ್ತು. ಪ್ರಭಾವಿ ‘ಕುರ್ಮಿ’ ಸಮುದಾಯದ ಪಕ್ಷ ಎಂದೇ ಹೆಸರಾಗಿರುವ ಅಪ್ನಾ ದಳ (ಕೆ), ಪೂರ್ವ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದೆ. ಕೃಷ್ಣಾ ಪಟೇಲ್ ಅವರ ಬೇಡಿಕೆಯು ಎಸ್ಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.