ಏಳು ದಶಕಗಳಿಂದ ಪ್ರಜಾತಂತ್ರದ ರಾಜಕೀಯದ ಏಳು ಬೀಳುಗಳನ್ನು ಗಮನಿಸುತ್ತಿದ್ದೇವೆ. ಒಬ್ಬ ಭ್ರಷ್ಟನನ್ನು ಸೋಲಿಸಲು ಇನ್ನೊಬ್ಬ ಭ್ರಷ್ಟನಿಗೆ ವೋಟು ಹಾಕಿ ಗೆಲ್ಲಿಸುವ ಪರಂಪರೆಗೆ ಮತದಾರ ಅಂಟಿಕೊಂಡಿದ್ದರಿಂದ ಬಡತನ, ನಿರುದ್ಯೋಗ, ಹಸಿವು, ಅನಾರೋಗ್ಯ, ಸಾಂಸ್ಕೃತಿಕ
ಅಧಃಪತನದಂತಹ ಸಮಸ್ಯೆಗಳು ಜೀವಂತವಾಗಿರುವುದನ್ನು ನಾವಿಂದು ಕಾಣುವಂತಾಗಿದೆ. ಸರ್ಕಾರಗಳು ಬದಲಾದರೂ ಜನರ ಸಮಸ್ಯೆಗಳು ಬದಲಾಗುತ್ತಿಲ್ಲ. ಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳನ್ನು ಪತ್ತೆ ಹಚ್ಚಿ ಪರಿಹಾರ ಒದಗಿಸಬಲ್ಲ ವ್ಯಕ್ತಿಯನ್ನು ನಾವು ಜನಪ್ರತಿಧಿಯಾಗಿ ಆಯ್ಕೆ ಮಾಡಬೇಕಿದೆ.