ಬಿಗ್ಬಾಸ್ನಿಂದ ಮೂರು ವಾರಕ್ಕೆ ಹೊರಬೀಳುವ ಮೊದಲೇ ಜಯರಾಂ ಕಾರ್ತಿಕ್ ಮತ್ತು ಅನುಪಮಾ ಗೌಡ ಅವರನ್ನೇ ಈ ಚಿತ್ರದ ನಾಯಕ, ನಾಯಕಿಯಾಗಿ ಆಯ್ಕೆ ಮಾಡಿದ್ದ ಬಗ್ಗೆಯೂ ಹೇಳಿಕೊಂಡರು. ಇದು ಅರವತ್ತರ ದಶಕದ ಕಥೆ. ಎಂಬತ್ತರ ದಶಕಕ್ಕೆ ಸರಿಹೊಂದುವಂತೆ ಚಿತ್ರಕಥೆ ಹೆಣೆದಿದ್ದಾರಂತೆ. ಚಿತ್ರದ ಮುಹೂರ್ತ ನೆರವೇರಿಸಿದ ಬಳಿಕ ಮಾತಿಗೆ ಕುಳಿತರು. ಉತ್ತಮವಾಗಿ ಸಿನಿಮಾ ಪೂರ್ಣಗೊಳಿಸಿ ಜನರ ಮುಂದೆ ಬರುವ ವಿಶ್ವಾಸ ಅವರ ಮಾತುಗಳಲ್ಲಿತ್ತು.