ಹಾಡಿಗಾಗಿ ಅದ್ದೂರಿ ಸೆಟ್ ಅಳವಡಿಸಲಾಗಿತ್ತು. ಈ ಎಣ್ಣೆ ಹಾಡಿಗೆ ಬಿರಾದಾರ್ ಜೊತೆಗೆ ನಟ ಕರಿಸುಬ್ಬು, ಪ್ರಶಾಂತ್ ಸಿದ್ಧಿ, ಆರ್.ಡಿ. ಬಾಬು ಮತ್ತು ವಿವೇಕ್ ಜಂಬಗಿ ಹೆಜ್ಜೆ ಹಾಕಿದರು. ‘ಹೇ... ಒಲವಿನ ಚೆಲುವಿನ ಕುಡುಕರೆ ಕೇಳೀ... ಈ ಕವಿತೆಯು ಸಮರ್ಪಣೆ ನಿಮಗೆ...’ ಎಂದು ಶುರುವಾಗುವ ಈ ಹಾಡಿಗೆ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ಈ ಹಾಡು ಬರೆದಿರುವುದು ವಿ. ನಾಗೇಂದ್ರಪ್ರಸಾದ್.