ಚಿತ್ರೀಕರಣಕ್ಕಾಗಿ ಕಜಕಿಸ್ತಾನಕ್ಕೆ ಫೆಬ್ರುವರಿ ಮೂರನೇ ವಾರದಲ್ಲಿ ಚಿತ್ರತಂಡವು ತೆರಳಿದೆ. ಗಣೇಶ್, ನಟ ದಿಗಂತ್ ಹಾಗೂ ಪವನ್ ಜೊತೆಗಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಮುಖಾಂತರ ಹಂಚಿಕೊಳ್ಳುತ್ತಿದ್ದಾರೆ. ವಾರದ ಹಿಂದಷ್ಟೇ ಹಿಮಾವೃತವಾದ ರಸ್ತೆಯಲ್ಲಿ ಕಾರಿನಲ್ಲಿ ಸಾಗುವಾಗ ವಿಡಿಯೊವೊಂದನ್ನು ಗಣೇಶ್ ಮಾಡಿದ್ದರು. ಕಾರಿನಲ್ಲಿ ಮಲಗಿದ್ದ ದಿಗಂಗ್ ಅವರನ್ನು ‘ದೂದ್ ಪೇಡಾ’ ಎಂದು ಕರೆದು ಎಬ್ಬಿಸಿದ್ದರು. ಮೈಕೊರೆಯುವ ಚಳಿಯಲ್ಲಿ, ಹಿಮಾವೃತವಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ ನಾಯಕಿಯರಾಗಿದ್ದಾರೆ.