ಸಂಭಾಷಣೆ ಸಂದರ್ಭದಲ್ಲಿ ಸಿನಿಮಾದ ಜಾಹೀರಾತಿನ ಬಗ್ಗೆ ಜಗ್ಗೇಶ್ ಪ್ರಸ್ತಾಪಿಸುತ್ತಾರೆ. ಕನ್ನಡದ ದಿನಪತ್ರಿಕೆಯೊಂದಕ್ಕೆ ಜಾಹೀರಾತು ನೀಡಲು ಅವರು ಸೂಚಿಸುತ್ತಾರೆ. ಸಂಭಾಷಣೆಯಲ್ಲಿ ‘ಪಾಪ...ಆ ಹುಡುಗನಿಗೆ ಮಾಡೋಕೆ ಹೇಳಿದ್ನಲ್ಲ, ಅವನಿಗೂ ಒಂಚೂರು ಏನಾದರೂ ಕೊಡು. ಅವನು ಮದುವೆ ಆಗಿದ್ದಾನೆ. ಪಾಪ, ಸಪರೇಟ್ ಸಂಸಾರ ಮಾಡ್ತಾವ್ನೆ. ಕಷ್ಟದಲ್ಲಿ ಇದ್ದಾನೆ. ಒಳ್ಳೆಯ ಹಾರ್ಡ್ ವರ್ಕರ್. ನಮ್ಮ ಹತ್ರ ಇರುವವರೆಲ್ಲ ಇಂಥವರೇನೇ. ಬಟ್, ದರ್ಶನ್ ಥರ, ಅವರ ಥರ ಇದಾರಲ್ಲಾ.. ಮಾಂಸ ಕಳಿಸಿ ಅಣ್ಣಾ... ನೂರು ಕುರಿ ಕಳಿಸಿ ಅಣ್ಣಾ ಅನ್ನುವಂಥವರು ಯಾರೂ ಇಲ್ಲ ನನ್ನ ಹತ್ತಿರ. ಸಹಾಯ ಮಾಡು’ ಎಂದು ಜಗ್ಗೇಶ್ ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಆಡಿಯೊ ಕ್ಲಿಪ್ ಹರಿದಾಡುತ್ತಿದ್ದು, ಇದು ದರ್ಶನ್ ಬೆಂಬಲಿಗರ ವಿರೋಧಕ್ಕೆ ಕಾರಣವಾಗಿದೆ.