ಚಾಲುಕ್ಯರ ರಾಜಧಾನಿ ಐಹೊಳೆಯ ಮಹತ್ವ ಸಾರುವ ಈ ಮೂಲಕ ನಾಡಿನ ಸಂಸ್ಕೃತಿ ಹಾಗೂ ಇತಿಹಾಸವನ್ನು ಸಾರುವ ‘ಐಹೊಳೆ’ ಚಿತ್ರ ಪ್ರತಿಷ್ಠಿತ ಅಯೋಧ್ಯೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ನವೆಂಬರ್ 10, 11ರಂದು ನಡೆಯುವ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಚಾಲುಕ್ಯರ ರಾಜಧಾನಿ ಐಹೊಳೆ ಅಂತರರಾಷ್ಟ್ರೀಯ ಪ್ರವಾಸಿ ತಾಣ. ಈ ತಾಣದ ಇತಿಹಾಸವನ್ನು ಮಕ್ಕಳ ಚಿತ್ರದ ಮೂಲಕ ಸಾರುವ ಪ್ರಯತ್ನವನ್ನು ಚಿತ್ರದ ನಿರ್ದೇಶಕ ರವೀಂದ್ರನಾಥ ಸಿರವಾರ ಮಾಡಿದ್ದಾರೆ.
ಈ ಚಿತ್ರ ಸಂಪೂರ್ಣ ಐಹೊಳೆಯಲ್ಲಿಯೇ ಚಿತ್ರೀಕರಣಗೊಂಡಿದೆ. ಸಿರಿವರ ಕ್ರಿಯೇಷನ್ ನಿರ್ಮಿಸಿರುವ ಈ ಚಿತ್ರಕ್ಕೆ ನಾದಬ್ರಹ್ಮ ಡಾ. ಹಂಸಲೇಖ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ರವೀಂದ್ರನಾಥ ಸಿರಿವರ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪತ್ರಕರ್ತ ಶಂಕರ ಪಾಗೋಜಿ ಸಂಭಾಷಣೆ ಇದೆ.
ತಾರಾಗಣದಲ್ಲಿ ನಾಯಕ ರೇವಂತ್, ನಾಯಕಿ ಪ್ರಗತಿ, ವೈಜನಾಥ ಬಿರಾದಾರ್, ಶ್ರೀಧರ್, ಅರ್ಚನಾ ಪ್ರಮುಖ ಪಾತ್ರದಲ್ಲಿದ್ದಾರೆ.