‘ಡೈನಾಮಿಕ್ ಜೋಡಿ ಹಿಂದಿರುಗಿದೆ! ಐಕಾನ್ ಸ್ಟಾರ್ ಅಲ್ಲುಅರ್ಜುನ್ ಮತ್ತು ಬ್ಲಾಕ್ಬಸ್ಟರ್ ನಿರ್ದೇಶಕ ತ್ರಿವಿಕ್ರಮ್ ತಮ್ಮ 4ನೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಾರೆ! ಹೆಚ್ಚಿನ ವಿವರಗಳು ಶೀಘ್ರದಲ್ಲೇ! ಬಿಡುಗಡೆಯಾಗಲಿವೆ’ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ 2012ರಲ್ಲಿ ಮೊದಲ ಬಾರಿಗೆ ‘ಜುಲಾಯಿ’ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2015ರಲ್ಲಿ ‘S/O ಸತ್ಯಮೂರ್ತಿ’, ಬಳಿಕ, 2020ರಲ್ಲಿ ‘ಅಲಾ ವೈಕುಂಠಪುರಮುಲೊ’ ಸೂಪರ್ ಹಿಟ್ ಚಿತ್ರಗಳ ಮೂಲಕ ಈ ಜೋಡಿ ಹೆಸರು ಮಾಡಿತ್ತು.
ಈ ಸಕ್ಸಸ್ಫುಲ್ ಜೋಡಿಯ ನಾಲ್ಕನೇ ಚಿತ್ರವು ‘ದೃಶ್ಯ ಚಮತ್ಕಾರ’ದಿಂದ ಕೂಡಿರುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಅಲ್ಲು ಅರ್ಜುನ್ ಅವರು, ಸದ್ಯ ಬಹುನಿರೀಕ್ಷಿತ ‘ಪುಷ್ಪ: ದಿ ರೂಲ್’ಬಿಡುಗಡೆಗಾಗಿ ಕಾಯುತ್ತಿದ್ದಾರೆ.