ಮುಂಬೈ: ಗಾಯದಿಂದ ಚೇತರಿಸಿಕೊಂಡು ಆರೋಗ್ಯವಾಗಿರಲು ಹಾರೈಸಿದ ಅಭಿಮಾನಿಗಳಿಗೆ ಬಾಲಿವುಡ್ನ ಮೇರು ನಟ ಅಮಿತಾಬ್ ಬಚ್ಚನ್ ಅವರು ಧನ್ಯವಾದ ತಿಳಿಸಿದ್ದಾರೆ.
ಹೈದರಾಬಾದ್ನಲ್ಲಿ ’ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ತನ್ನ ಪಕ್ಕೆಲುಬು ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆದಿದ್ದೆ. ಈಗ ಚೇತರಿಸಿಕೊಳ್ಳಲು ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಅಮಿತಾಬ್ ಭಾನುವಾರ ತಮ್ಮ ಬ್ಲಾಗ್ನಲ್ಲಿ ಸುದೀರ್ಘವಾಗಿ ತಿಳಿಸಿದ್ದರು. ಈ ಹಿನ್ನೆಲೆ, ಅವರ ಆರೋಗ್ಯಕ್ಕಾಗಿ ಅಪಾರ ಅಭಿಮಾನಿಗಳು ಹಾರೈಸಿದ್ದರು.
ಮಂಗಳವಾರ ಟ್ವೀಟ್ ಮೂಲಕ ಎಲ್ಲರ ಹಾರೈಕೆಗೆ ಧನ್ಯವಾದ ತಿಳಿಸಿರುವ ಅಮಿತಾಬ್, ‘ನಿಮ್ಮ ಕಾಳಜಿ, ಪ್ರೀತಿಗೆ ಕೃತಜ್ಞತೆ ಸಲ್ಲಿಸುವೆ. ನಾನು ವಿಶ್ರಾಂತಿ ಪಡೆಯುತ್ತಿದ್ದು ನಿಮ್ಮ ಪ್ರಾರ್ಥನೆಯೊಂದಿಗೆ ಸುಧಾರಿಸುತ್ತೇನೆ‘ ಎಂದು ಬರೆದಿದ್ದಾರೆ.
80ರ ವಯಸ್ಸಿನಲ್ಲೂ ಅಮಿತಾಬ್ ಬಚ್ಚನ್ ಅವರು ನಟಿಸುತ್ತಿರುವ ’ಪ್ರಾಜೆಕ್ಟ್ ಕೆ’ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ತಾರಾಗಣದ ಈ ಚಿತ್ರವು ಮುಂದಿನ ವರ್ಷ ತೆರೆಗೆ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.