ಯುವ ಮನಸ್ಸಿಗೆ ಹತ್ತಿರವಾದ ‘ಕಿಸ್’ ಸಿನಿಮಾದ ಮೂಲಕ ನಾಯಕ ವಿರಾಟ್ರನ್ನು ಚಂದನವನಕ್ಕೆ ಪರಿಚಯಿಸಿದ್ದರು ನಿರ್ದೇಶಕ ಎಪಿ ಅರ್ಜುನ್. ಈ ಮತ್ತೆ ಜೋಡಿ ಒಂದಾಗಿ ಸಿನಿಮಾ ಮಾಡಲಿದೆ. ಹೊಸ ವರ್ಷದ ದಿನದಂದು ಈ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದಾರೆ ಅರ್ಜುನ್. ‘ಮತ್ತೆ ವಿರಾಟ್ನೊಂದಿಗೆ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಈ ತಿಂಗಳ ಅಂತ್ಯದಿಂದ ಪ್ರಾಜೆಕ್ಟ್ ಆರಂಭಿಸುವ ಯೋಚನೆ ಇದೆ. ಬೆಂಗಳೂರು, ಮಂಗಳೂರು, ನೈನಿತಾಲ್ ಹಾಗೂ ಊಟಿಯಲ್ಲಿ ಸಿನಿಮಾ ಚಿತ್ರೀಕರಣ ಮಾಡುವ ಯೋಚನೆ ಇದೆ. ನಾಯಕಿಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದಿದ್ದಾರೆ.