‘ಮನೆಯ ಮುಂದೆ ಚಪ್ಪರ ಹಾಕಿ, ಗುಂಡುಕಲ್ಲು, ಕುಂಬಗಳನ್ನು ಇಟ್ಟು, ಮಾವು, ಬಾಳೆ ಕಂಬ, ತೆಂಗಿನ ಗರಿಗಳಿಂದ ಅಲಂಕರಿಸಿ, ಹಳೇ ಕಾಲದಲ್ಲಿ ಮದುವೆಗಳಂತೆ ಧಾರೆ ಎರೆಯುವಕಾರ್ಯಕ್ರಮ ನಡೆಯಿತು. ಮದುವೆಯ ಊಟಕ್ಕೆ ಬಿಳಿ ಹೋಳಿಗೆ, ಕ್ಯಾರೆಟ್ ಹಲ್ವಾ, ಜಾಮೂನು, ಬೋಂಡಾ ಸೂಪು, ಪುಲಾವ್ ಮಾಡಿಸಿದ್ದೆವು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬಂಧುಗಳನ್ನು ಸೇರಿಸಿಕೊಂಡು, ಲಾಕ್ಡೌನ್ ನಿಯಮ ಪಾಲಿಸಿದೆವು’ ಎನ್ನುವ ಮಾತು ಸೇರಿಸಿದರು ಅರ್ಜುನ್.