ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ‘ಚಿತ್ರಕ್ಕೆ ಏಪ್ರಿಲ್ ಶೀರ್ಷಿಕೆ ಇಡಲಾಗಿದೆ. ಇದೇ ಇದರ ಕುತೂಹಲಕಾರಿ ಅಂಶ. ನಾಯಕನ ಮೂಲಕ ಅದನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದೇನೆ. ಕೊನೆಗೆ, ಅದಕ್ಕೊಂದು ಸಮರ್ಥನೆಯೂ ಸಿಗಲಿದೆ. ಒಂದು ಭಾಗದಲ್ಲಿ ಅವಳಿಗಾಗಿ ಹುಡುಕಾಟ ನಡೆಸುವುದೇ ಅಧಿಕಾರಿಯ ಕಾಯಕ. ಮತ್ತೊಂದು ಭಾಗದಲ್ಲಿ ಅವಳದು ಮಗಳಿಗಾಗಿ ಪರಿತಾಪ’ ಎಂದು ವಿವರಿಸಿದರು.