1980ರಲ್ಲಿ ಶ್ರೀವಾಸ್ತವ ಅವರ ಕಾಮಿಡಿ ಶೋಗಳನ್ನು ನೋಡುತ್ತಿದ್ದೆ. ಕಾನ್ಪುರದ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡ ಬಳಿಕ ಶ್ರೀವಾಸ್ತವ ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ನನ್ನದಾಯಿತು. ಕೊನೆಗೆ ಆತ್ಮೀಯರಾದರು. ಕಳೆದ ವರ್ಷ ಬಿಜೆಪಿ ಶಾಸಕಾಂಗ ಪಕ್ಷವು ನೂತನವಾಗಿ ರಚನೆಯಾದ ನಂತರ ಕರೆಯಲಾದ ಸಭೆಗೆ ಶ್ರೀವಾಸ್ತವ ಅವರನ್ನು ಆಹ್ವಾನಿಸಲಾಗಿತ್ತು. ನಾನು ನೋಡಿದ ಅವರ ಕೊನೆಯ ಕಾಮಿಡಿ ಕಾರ್ಯಕ್ರಮವದು. 'ಮೇರೆ ಸಾಮ್ನೆ ಉತ್ತರ್ ಪ್ರದೇಶ್ ಕೆ ಛಾತೆ ಹೂ ಲೋಗ್ ಬೈಟೆ ಹೈ' ಎಂದಾಗ ಎಲ್ಲರೂ ನಗೆಗಡಲಲ್ಲಿ ತೇಲಿದ್ದರು.