‘ಇದು ಕರ್ನಾಟಕ, ಮಹಾರಾಷ್ಟ್ರ ಗಡಿಯ ಅಗ್ನಿರಾಂಪುರ ಎಂಬ ಕಾಲ್ಪನಿಕ ಊರೊಂದರಲ್ಲಿ ನಡೆಯುವ ಕಥೆ. 1947ರಲ್ಲಿ ನಮಗೆಲ್ಲ ಸ್ವಾತಂತ್ರ್ಯ ಬಂತು. ಆಗ ಶಾಂತಿಯಿಂದಲೇ ಹೋರಾಡಿ ಗೆದ್ದಿದ್ದೇವೆ. ಎಲ್ಲರ ಮನಸನ್ನು ಗೆದ್ದು ಕ್ರಾಂತಿ ಮಾಡಬೇಕು. ಗಡಿ ಭಾಗದಲ್ಲಿ ಲೋಕಲ್ ಕ್ರೈಮ್, ರೌಡಿಸಂ ಹೇಗಿರುತ್ತದೆ, ಅದು ಹುಡುಗರ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಇದನ್ನೆಲ್ಲ ಆ ಹುಡುಗರು ಹೇಗೆ ತಡೆಯುತ್ತಾರೆ, 21 ವರ್ಷಗಳಿಂದಲೂ ಆ ಊರಲ್ಲಿ ಕನ್ನಡ ರಾಜ್ಯೋತ್ಸವ ನಿಂತು ಹೋಗಿರುತ್ತದೆ, ಈ ಹುಡುಗರೆಲ್ಲ ಸೇರಿ ಅಲ್ಲಿ ಮತ್ತೆ ರಾಜ್ಯೋತ್ಸವ ಆಚರಿಸುತ್ತಾರೆ... ಹೀಗೆ ಕಥೆ ಸಾಗುತ್ತದೆ.