<p><strong>ಅತ್ಯುತ್ತಮ ಚೊಚ್ಚಲ ನಿರ್ದೇಶನ ನಿತಿನ್ ಕೃಷ್ಣಮೂರ್ತಿ</strong></p><p><strong>ಚಿತ್ರ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ</strong></p><p>‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ 2023ರ ಆರಂಭದಲ್ಲಿ ಚಿತ್ರಮಂದಿರಗಳಿಗೆ ಉಲ್ಲಾಸ ತುಂಬಿದ ಸಿನಿಮಾ ಇದು. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆದಿದ್ದಷ್ಟೇ ಅಲ್ಲದೆ ಚಿತ್ರರಂಗಕ್ಕೂ ಉಸಿರು ತುಂಬಿದ ಹೆಗ್ಗಳಿಕೆ ಈ ಸಿನಿಮಾದ್ದು. ಹಾಸ್ಯದ ಕಚಗುಳಿಯಿಟ್ಟು, ಸಿದ್ಧಸೂತ್ರಗಳನ್ನೆಲ್ಲಾ ಬದಿಗೊತ್ತಿ ಭಿನ್ನವಾದ ಮಾದರಿಯ ಸಿನಿಮಾವೊಂದನ್ನು ನಿತಿನ್ ಕೃಷ್ಣಮೂರ್ತಿ ಪ್ರೇಕ್ಷಕರೆದುರಿಗೆ ಇಟ್ಟಿದ್ದರು. ಇದು ಯುವಜನರನ್ನು ದಂಡುದಂಡಾಗಿ ಚಿತ್ರಮಂದಿರದತ್ತ ಸೆಳೆದಿತ್ತು.</p><p>ಈ ಸಿನಿಮಾದ ನಿರ್ದೇಶನಕ್ಕಾಗಿ ನಿತಿನ್ ಕೃಷ್ಣಮೂರ್ತಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದಿದ್ದಾರೆ.</p><p>ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ‘ನಮ್ಮನ್ನೆಲ್ಲ 80–90ರ ದಶಕದಲ್ಲಿ ಕಥೆಗಾರರಾಗಿ ಬೆಳೆಸಿದ ಪತ್ರಿಕೆ ‘ಪ್ರಜಾವಾಣಿ’. ಈ ಪತ್ರಿಕೆಯನ್ನು ಓದದೇ ಇರುವ ದಿನವಿಲ್ಲ. ಪೂರ್ವಗ್ರಹರಹಿತವಾಗಿ ಈ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಈ ಪತ್ರಿಕೆ ಒಂದು ಸಿನಿಮಾ ಸಂಬಂಧಿಸಿದ ಕಾರ್ಯಕ್ರಮ ಆಗಬೇಕು ಎನ್ನುವ ಕೊರತೆ ಇತ್ತು. ಅದು ಈಗ ನೀಗಿದೆ’ ಎಂದರು.</p><p>‘ಪ್ರಜಾವಾಣಿ’ಗೂ ನನಗೂ ಅವಿನಾಭಾವ ಸಂಬಂಧ ಇದೆ. ಕಾಲೇಜು ದಿನದಲ್ಲಿ ಪತ್ರಿಕೆ ನಡೆಸಿದ ಕ್ವಿಜ್ ಸ್ಪರ್ಧೆಯಲ್ಲಿ ಏರ್ಕೂಲರ್ ಗೆದ್ದಿದ್ದೆ’ ಎನ್ನುವ ನೆನಪನ್ನು ನಿರ್ದೇಶದ ಸಿಂಪಲ್ ಸುನಿ ಹಂಚಿಕೊಂಡರು.</p><p>ತಂದೆ ಹಾಗೂ ಅಪ್ಪುಗೆ ಪ್ರಶಸ್ತಿ ಅರ್ಪಣೆ: ‘ನನ್ನ ಚೊಚ್ಚಲ ಸಿನಿಮಾದಲ್ಲಿ ಮುನ್ನೂರು ಜನರು ಕಾರ್ಯನಿರ್ವಹಿಸಿದ್ದರು. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತಿದ್ದು ಇಡೀ ಕನ್ನಡ ಚಿತ್ರರಂಗ. ಇಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾಗೆ ಪ್ರೋತ್ಸಾಹ ನೀಡಿದ್ದರು. ಕನ್ನಡ ಚಿತ್ರರಂಗ ಎನ್ನುವುದು ಬಹಳ ಪ್ರೀತಿ ನೀಡುವ ಇಂಡಸ್ಟ್ರಿ. ಹೊಸಬರಿಗೆ ಈ ರೀತಿಯ ಬೆಂಬಲ ಸಿಗುತ್ತಲೇ ಇರಬೇಕು. ಹೀಗಿದ್ದಾಗ ಇಡೀ ಚಿತ್ರರಂಗ ಬೆಳೆಯಲು ಸಾಧ್ಯ. ಈ ಪ್ರಶಸ್ತಿಯನ್ನು ನನ್ನ ಪ್ರೀತಿಯ ತಂದೆ ಹಾಗೂ ಅಪ್ಪು ಸರ್ಗೆ ಅರ್ಪಿಸುತ್ತೇನೆ’ ಎಂದರು ನಿತಿನ್ ಕೃಷ್ಣಮೂರ್ತಿ.</p><p>‘ಹಾಸ್ಟೆಲ್ ಹುಡುಗರಿಗೆ’ ಸಿನಿಮಾ ಆಯಿತು ಮುಂದೆ ಎನ್ನುವ ಅನುಶ್ರೀ ಪ್ರಶ್ನೆಗೆ, ‘ಹೊಸ ಕಥೆ ಬರೆಯುತ್ತಿದ್ದೇನೆ. ಯಾವ ಜಾನರ್ನ ಸಿನಿಮಾ ಎಂದು ಮುಂದೆ ತಿಳಿಯಲಿದೆ’ ಎಂದ ನಿತಿನ್, ಕುತೂಹಲವನ್ನು ಉಳಿಸಿದರು.</p><p><strong>ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು:</strong> ಉಮೇಶ್ ಕೆ.ಕೃಪ(ಚಿತ್ರ: ಟಗರುಪಲ್ಯ), ಶಶಾಂಕ್ ಸೋಗಾಲ್(ಚಿತ್ರ: ಡೇರ್ಡೆವಿಲ್ ಮುಸ್ತಾಫಾ), ಸಿಂಧು ಶ್ರೀನಿವಾಸಮೂರ್ತಿ(ಚಿತ್ರ: ಆಚಾರ್ ಆ್ಯಂಡ್ ಕೋ.), ನಿತಿನ್ ಕೃಷ್ಣಮೂರ್ತಿ(ಚಿತ್ರ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ), ವಿಶಾಲ್ ಅತ್ರೇಯ(ಚಿತ್ರ: ತತ್ಸಮ ತದ್ಭವ)</p>.ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ-2 | ಶಿಶಿರ್ ಉತ್ತಮ ನಟ, ರುಕ್ಮಿಣಿ ಉತ್ತಮ ನಟಿ .ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2: ತಾರೆಯರ ಸಮಾಗಮ, ಮೇಳೈಸಿದ ನೃತ್ಯ ಸಂಭ್ರಮ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅತ್ಯುತ್ತಮ ಚೊಚ್ಚಲ ನಿರ್ದೇಶನ ನಿತಿನ್ ಕೃಷ್ಣಮೂರ್ತಿ</strong></p><p><strong>ಚಿತ್ರ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ</strong></p><p>‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ 2023ರ ಆರಂಭದಲ್ಲಿ ಚಿತ್ರಮಂದಿರಗಳಿಗೆ ಉಲ್ಲಾಸ ತುಂಬಿದ ಸಿನಿಮಾ ಇದು. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆದಿದ್ದಷ್ಟೇ ಅಲ್ಲದೆ ಚಿತ್ರರಂಗಕ್ಕೂ ಉಸಿರು ತುಂಬಿದ ಹೆಗ್ಗಳಿಕೆ ಈ ಸಿನಿಮಾದ್ದು. ಹಾಸ್ಯದ ಕಚಗುಳಿಯಿಟ್ಟು, ಸಿದ್ಧಸೂತ್ರಗಳನ್ನೆಲ್ಲಾ ಬದಿಗೊತ್ತಿ ಭಿನ್ನವಾದ ಮಾದರಿಯ ಸಿನಿಮಾವೊಂದನ್ನು ನಿತಿನ್ ಕೃಷ್ಣಮೂರ್ತಿ ಪ್ರೇಕ್ಷಕರೆದುರಿಗೆ ಇಟ್ಟಿದ್ದರು. ಇದು ಯುವಜನರನ್ನು ದಂಡುದಂಡಾಗಿ ಚಿತ್ರಮಂದಿರದತ್ತ ಸೆಳೆದಿತ್ತು.</p><p>ಈ ಸಿನಿಮಾದ ನಿರ್ದೇಶನಕ್ಕಾಗಿ ನಿತಿನ್ ಕೃಷ್ಣಮೂರ್ತಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದಿದ್ದಾರೆ.</p><p>ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ‘ನಮ್ಮನ್ನೆಲ್ಲ 80–90ರ ದಶಕದಲ್ಲಿ ಕಥೆಗಾರರಾಗಿ ಬೆಳೆಸಿದ ಪತ್ರಿಕೆ ‘ಪ್ರಜಾವಾಣಿ’. ಈ ಪತ್ರಿಕೆಯನ್ನು ಓದದೇ ಇರುವ ದಿನವಿಲ್ಲ. ಪೂರ್ವಗ್ರಹರಹಿತವಾಗಿ ಈ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಈ ಪತ್ರಿಕೆ ಒಂದು ಸಿನಿಮಾ ಸಂಬಂಧಿಸಿದ ಕಾರ್ಯಕ್ರಮ ಆಗಬೇಕು ಎನ್ನುವ ಕೊರತೆ ಇತ್ತು. ಅದು ಈಗ ನೀಗಿದೆ’ ಎಂದರು.</p><p>‘ಪ್ರಜಾವಾಣಿ’ಗೂ ನನಗೂ ಅವಿನಾಭಾವ ಸಂಬಂಧ ಇದೆ. ಕಾಲೇಜು ದಿನದಲ್ಲಿ ಪತ್ರಿಕೆ ನಡೆಸಿದ ಕ್ವಿಜ್ ಸ್ಪರ್ಧೆಯಲ್ಲಿ ಏರ್ಕೂಲರ್ ಗೆದ್ದಿದ್ದೆ’ ಎನ್ನುವ ನೆನಪನ್ನು ನಿರ್ದೇಶದ ಸಿಂಪಲ್ ಸುನಿ ಹಂಚಿಕೊಂಡರು.</p><p>ತಂದೆ ಹಾಗೂ ಅಪ್ಪುಗೆ ಪ್ರಶಸ್ತಿ ಅರ್ಪಣೆ: ‘ನನ್ನ ಚೊಚ್ಚಲ ಸಿನಿಮಾದಲ್ಲಿ ಮುನ್ನೂರು ಜನರು ಕಾರ್ಯನಿರ್ವಹಿಸಿದ್ದರು. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತಿದ್ದು ಇಡೀ ಕನ್ನಡ ಚಿತ್ರರಂಗ. ಇಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾಗೆ ಪ್ರೋತ್ಸಾಹ ನೀಡಿದ್ದರು. ಕನ್ನಡ ಚಿತ್ರರಂಗ ಎನ್ನುವುದು ಬಹಳ ಪ್ರೀತಿ ನೀಡುವ ಇಂಡಸ್ಟ್ರಿ. ಹೊಸಬರಿಗೆ ಈ ರೀತಿಯ ಬೆಂಬಲ ಸಿಗುತ್ತಲೇ ಇರಬೇಕು. ಹೀಗಿದ್ದಾಗ ಇಡೀ ಚಿತ್ರರಂಗ ಬೆಳೆಯಲು ಸಾಧ್ಯ. ಈ ಪ್ರಶಸ್ತಿಯನ್ನು ನನ್ನ ಪ್ರೀತಿಯ ತಂದೆ ಹಾಗೂ ಅಪ್ಪು ಸರ್ಗೆ ಅರ್ಪಿಸುತ್ತೇನೆ’ ಎಂದರು ನಿತಿನ್ ಕೃಷ್ಣಮೂರ್ತಿ.</p><p>‘ಹಾಸ್ಟೆಲ್ ಹುಡುಗರಿಗೆ’ ಸಿನಿಮಾ ಆಯಿತು ಮುಂದೆ ಎನ್ನುವ ಅನುಶ್ರೀ ಪ್ರಶ್ನೆಗೆ, ‘ಹೊಸ ಕಥೆ ಬರೆಯುತ್ತಿದ್ದೇನೆ. ಯಾವ ಜಾನರ್ನ ಸಿನಿಮಾ ಎಂದು ಮುಂದೆ ತಿಳಿಯಲಿದೆ’ ಎಂದ ನಿತಿನ್, ಕುತೂಹಲವನ್ನು ಉಳಿಸಿದರು.</p><p><strong>ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು:</strong> ಉಮೇಶ್ ಕೆ.ಕೃಪ(ಚಿತ್ರ: ಟಗರುಪಲ್ಯ), ಶಶಾಂಕ್ ಸೋಗಾಲ್(ಚಿತ್ರ: ಡೇರ್ಡೆವಿಲ್ ಮುಸ್ತಾಫಾ), ಸಿಂಧು ಶ್ರೀನಿವಾಸಮೂರ್ತಿ(ಚಿತ್ರ: ಆಚಾರ್ ಆ್ಯಂಡ್ ಕೋ.), ನಿತಿನ್ ಕೃಷ್ಣಮೂರ್ತಿ(ಚಿತ್ರ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ), ವಿಶಾಲ್ ಅತ್ರೇಯ(ಚಿತ್ರ: ತತ್ಸಮ ತದ್ಭವ)</p>.ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ-2 | ಶಿಶಿರ್ ಉತ್ತಮ ನಟ, ರುಕ್ಮಿಣಿ ಉತ್ತಮ ನಟಿ .ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2: ತಾರೆಯರ ಸಮಾಗಮ, ಮೇಳೈಸಿದ ನೃತ್ಯ ಸಂಭ್ರಮ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>