ಮಧ್ಯಾಹ್ನ ದಾವಣಗೆರೆಗೆ ಬಂದಿದ್ದರು. ಬಳಿಕ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ಇರುವ ಶಾಮನೂರು ಅವರ ತೋಟಕ್ಕೆ ಭೇಟಿ ನೀಡಿದರು. ಅಲ್ಲಿ ಇರುವ ವಿವಿಧ ಜಾತಿಗಳ ಹಸುಗಳು, ವಿವಿಧ ತಳಿಯ ಕುರಿಗಳನ್ನು ವೀಕ್ಷಿಸಿದರು. ಬಳಿಕ ದಾವಣಗೆರೆ ಕಲ್ಲೇಶ್ವರ ರೈಸ್ ಮಿಲ್ ಬಳಿ ಶಾಮನೂರು ಕುಟುಂಬ ಸಾಕಿರುವ ಕುದುರೆಗಳನ್ನು ನೋಡಿದರು. ಅವುಗಳ ಲಾಲನೆ, ಪಾಲನೆಗಳ ಬಗ್ಗೆ ಮಾಹಿತಿ ಪಡೆದರು. ಸೋಮವಾರ ಕೆಲವು ರೈತರನ್ನು ಭೇಟಿ ಮಾಡಲಿದ್ದಾರೆ.